ಹೊಸದಿಗಂತ ಡಿಜಿಟಲ್ ಡೆಸ್ಕ್
ಮಳೆಗಾಲ ಶುರುವಾಯಿತು ಎಂದರೆ ಮನೆ ಸೋರುವುದು , ಕಟ್ಟಡಗಳು ಸೊರೊವುದು ಕೇಳಿದ್ದೇವೆ. ಇದೀಗ ಇಲ್ಲಿ ರೈಲಿನಲ್ಲೂ ಇಂತಹದೊಂದು ಘಟನೆ ನಡೆದಿದೆ. ಪಂಚವಟಿ ಎಕ್ಸ್ಪ್ರೆಸ್ ರೈಲಿನ ಎಸಿ ಕಂಪಾರ್ಟ್ಮೆಂಟ್ನಲ್ಲಿ ಸೋರಿಕೆಯಾಗ್ತಿದ್ದು, ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡುವಂತಾಗಿದೆ.
ಮಳೆಯಿಂದಾಗಿ ಮುಂಬೈ – ಮನ್ಮಾಡ್ ಪಂಚವಟಿ ಎಕ್ಸ್ಪ್ರೆಸ್ನ ಮಾಸಿಕ ಸೀಸನ್ ಟಿಕೆಟ್ ಹೊಂದಿರುವವರಿಗೆ ಕಾಯ್ದಿರಿಸಿದ ಎಸಿ ಕೋಚ್ನ ಮೇಲ್ಛಾವಣಿ ಸೋರಿಕೆಯಾಗುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ವಿಧಿಯಿಲ್ಲದೆ ತಮ್ಮ ತಮ್ಮ ಬ್ಯಾಗ್ಗಳಲ್ಲಿದ್ದ ಛತ್ರಿಗಳನ್ನು ಇಟ್ಟು ಪ್ರಯಾಣ ಮಾಡ್ಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸಾವಿರಾರು ರೂಪಾಯಿ ನೀಡಿ ರೈಲು ಟಿಕೆಟ್ ಪಡೆದುಕೊಂಡರೂ ನೆಮ್ಮದಿಯಲ್ಲಿ ಸಂಚರಿಸಲು ಸಾಧ್ಯವಾಗದೆ ತಲೆಯ ಮೇಲೆ ಛತ್ರಿ ಹಿಡಿದುಕೊಂಡು ಪ್ರಯಾಣಿಸಬೇಕಾಗಿದೆ. ರೈಲ್ವೆ ಆಡಳಿತ ಕೂಡಲೇ ಈ ಬಗ್ಗೆ ಗಮನಹರಿಸಿ ಈ ಕೋಚ್ ದುರಸ್ತಿಗೊಳಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ರೈಲಿನಲ್ಲಿರುವ ಸಿ-2 ಹವಾನಿಯಂತ್ರಿತ ಕೋಚ್ನ ಮೇಲ್ಛಾವಣಿಯಿಂದ ನೀರು ಜಿನುಗುತ್ತಿದ್ದು, ಇದರಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಗೋಳು ತೋಡಿಕೊಂಡಿದ್ದಾರೆ.