ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ರೈಲು ನಿಲ್ದಾಣ, ಮಾಲ್ಗಳಿಗೆ ಬಾಂಬ್ ದಾಳಿ ನಡೆಸುವ ಬಗ್ಗೆ ನೀಲಗಿರಿ ಜಿಲ್ಲಾಧಿಕಾರಿ ಹಾಗೂ ಮುನ್ನಾರ್ ಪೊಲೀಸ್ ಅಧಿಕಾರಿಗಳಿಗೆ ಅನಾಮಿಕ ಬೆದರಿಕೆ ಕರೆ ಬಂದಿದ್ದು, ಈ ಹಿನ್ನಲೆಯಲ್ಲಿ ಇಲಾಖೆಗಳು ಹೈ ಅಲಟ್೯ ಆಗಿವೆ.
ಕರೆ ಬಂದಿರುವ ಸಂಖ್ಯೆಯ ಬೆನ್ನತ್ತಿದ ತನಿಖಾ ತಂಡಕ್ಕೆ ಮಧುರೈ ವಿಳಾಸ ಸಿಕ್ಕಿದ್ದು, ಸಂಖ್ಯೆಯ ಮಾಲಿಕ ತನ್ನ ದೂರವಾಣಿ ಕೆಲವು ದಿನಗಳ ಹಿಂದೆ ಕಳೆದುಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದೀಗ ಭದ್ರತೆ ಬಿಗಿಗೊಳಿಸಲಾಗಿದ್ದು, ಕರ್ನಾಟಕ ಕೇರಳ ಗಡಿ ಭಾಗದಲ್ಲಿ ತಪಾಸಣೆ ತೀವ್ರಗೊಂಡಿದೆ. ಜೊತೆಗೆ ಸ್ಥಳೀಯ, ರೈಲ್ವೆ ಪೋಲೀಸರು, ಗುಪ್ತಚರ ಸಂಸ್ಥೆಗಳು ಎಚ್ಚರದಲ್ಲಿರುವಂತೆ ಸೂಚಿಸಲಾಗಿದೆ.