ಹೊಸದಿಗಂತ ವರದಿ, ವಿಜಯಪುರ:
ಸಿಡಿಲು ಬಡಿದು ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಜೈನಾಬಿ ನಜೀರಅಹ್ಮದ ಸಿಪಾಯಿ (55) ಸಿಡಿಲು ಬಡಿದು ಮೃತಪಟ್ಟ ಮಹಿಳೆ.
ಜೈನಾಬಿ ಸಿಪಾಯಿ, ಹೊಲದಲ್ಲಿ ಕಸ ತೆಗೆಯುವ ವೇಳೆ ಮಳೆ ಬಂದಿದ್ದು, ಮರದ ಕೆಳಗೆ ನಿಂತಿರುವ ವೇಳೆಯಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ.
ಈ ವೇಳೆ ಗಿಡದ ಪಕ್ಕದಲ್ಲಿದ ಎಮ್ಮೆಗೂ ಸಿಡಿಲು ತಾಗಿದ್ದು, ಎಮ್ಮೆ ಕೂಡ ಮೃತಪಟ್ಟಿದೆ.
ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.