ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಮಣ್ಣಿನಿಂದ ಮಾಡಿದ ವಸ್ತುಗಳ ಹೆಚ್ಚು ಬಾಳಿಕೆ ಬರುವುದಿಲ್ಲ. ನೆಲಕ್ಕೆ ತಾಗಿದ್ರೆ ಸಾಕು ಒಡೆದು ಪೀಸ್ ಪೀಸ್ ಆಗುತ್ತೆ. ಆದ್ರೆ ಇಲ್ಲೊಂದು ಮಡಿಕೆ ಕಲ್ಲಿನಿಂದ ಜೋರಾಗಿ ಚಚ್ಚಿದರೂ ಒಡೆಯೋದಿರಲಿ..ಸೀಳು ಸಹ ಬಿಟ್ಟಿಲ್ಲ. ಇಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಗವಾನ್ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ಅದ್ದೂರಿ ಆಚರಣೆಗಳು ನಡೆಯುತ್ತವೆ. ಬಗೆಬಗೆಯ ಅಲಂಕಾರ, ಭಜನೆ ಇವುಗಳ ಜೊತೆಗೆ ಮಡಿಕೆ ಒಡೆಯುವುದು ಕೂಡ ಆಚರಣೆಯಲ್ಲಿದೆ. ಆಕಡೆ ಈ ಕಡೆ ಕಂಬ ನಿಲ್ಲಿಸಿ ಹಗ್ಗ ಕಟ್ಟಿ ಅದಕ್ಕೆ ಮಡಿಕೆ ಕಟ್ಟುತ್ತಾರೆ. ಯುವಕರು ಅಥವಾ ಯುವತಿಯರು ಎಲ್ಲರೂ ಒಟ್ಟಾಗಿ ಓಬ್ಬನನ್ನು ಮೇಲೆ ಹತ್ತಿಸಿ ಮಡಿಕೆ ಒಡೆಯಲು ಸಹಾಯ ಮಾಡುವುದು ಪದ್ದತಿ. ಕೆಳಗಿರುವವರೆಲ್ಲ ಬಣ್ಣದ ನೀರು ಎರಚುತ್ತಾ ಅವರಿಗೆ ತೊಂದರೆ ಕೊಡುತ್ತಾರೆ. ಇದೆಲ್ಲಾ ಹೇಳೋದಕ್ಕಿಂತ..ನೋಡಿದ್ರೇನೇ ಚಂದ. ಆದರೆ ಈ ವಿಡಿಯೋದಲ್ಲಿ ಕತೆ ಬೇರೇನೆ ಇದೆ. ಮೇಲೆ ಹತ್ತಿದ ಯುವಕನೊಬ್ಬ ಕಲ್ಲಿನಿಂದ ಜೋರಾಗಿ ಚಚ್ಚಿದರೂ ಮಡಿಕೆ ಒಡೆದಿಲ್ಲ. ಮತ್ತೊಬ್ಬ ಯುವಕ ಕೂಡ ಪ್ರಯತ್ನಿಸಿದರೂ ಸಹ ಆತನಿಂದಲೂ ಸಾಧ್ಯವಾಗಿಲ್ಲ.
Yeh Kumbhar(potter) bhai/behen deserves road contract work from Ahmedabad Muncipal Corporation 🙏🏽😋!
pic.twitter.com/lpJVGv0mp0— Kumar Manish (@kumarmanish9) August 20, 2022
ಈ ವಿಡಿಯೋಗೆ ಇದೀಗ ವಿವಿಧ ಕಮೆಂಟ್ಗಳು ಹರಿದಾಡುತ್ತಿವೆ. ಈ ಮಡಿಕೆ ತಯಾರು ಮಾಡಿರುವ ಅಣ್ಣ/ತಂಗಿ ಯಾರಾದರೂ ಆಗಿರಲಿ ಅವರು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನಿಂದ ರಸ್ತೆ ಗುತ್ತಿಗೆ ಕೆಲಸಕ್ಕೆ ಅರ್ಹರಾಗಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.