ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಲೈಗರ್ ಸಿನಿಮಾ ಸೆಲೆಬ್ರೆಟಿಗಳು, ಸಿನಿಮಾ ವಿಮರ್ಶಕರು ಸೇರಿದಂತೆ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ. ಚಿತ್ರ ಬಿಡುಗಡೆಗೂ ಮುನ್ನವೇ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಭಾರೀ ಹೈಪ್ ಆಗಿದ್ದು ಗೊತ್ತೇ ಇದೆ. ಪ್ರಮೋಷನ್ ಮೂಲಕ ಹೈಪ್ ಸಿಕ್ಕರೂ ಸಿನಿಮಾದಲ್ಲಿ ಏನೂ ಇಲ್ಲ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಟ್ರೋಲ್ಗೆ ಗುರಿಯಾಗಿದ್ದಾರೆ. ಇದೇ ವೇಳೆ ರಂಗಸ್ತಲಂ, ಪುಷ್ಟ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಕ್ರೇಜ್ ಹಾಗೂ ತೆಲುಗು ಫೇಮಸ್ ಆಂಕರ್ ಅನಸೂಯ ಭಾರದ್ವಾಜ್ ಮಾಡಿರುವ ಕಾಮೆಂಟ್ಗಳು ಇದೀಗ ವೈರಲ್ ಆಗುತ್ತಿವೆ.
ಟ್ವಿಟರ್ ವೇದಿಕೆಯಲ್ಲಿ ನಾಯಕ ವಿಜಯ್ ದೇವರಕೊಂಡ ಅವರನ್ನು ಗುರಿಯಾಗಿಸಿಕೊಂಡು ಅನಸೂಯಾ ಕಾಮೆಂಟ್ ಮಾಡಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಅನಸೂಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ʻಅಮ್ಮನ ಬಗ್ಗೆ ಕೆಟ್ಟದಾಗಿ ಬೈದಿದ್ದ ಉಸಿರು ತಗುಲಿದೆ. ಕರ್ಮ ತಡವಾಗಿ ಬರಬಹುದು ಆದರೆ, ಬರುವುದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ. ಈ ಕಾಮೆಂಟ್ಗೆ ಕಾರಣ ಕೂಡ ಇದೆ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಅಮ್ಮನನ್ನು ಬೈಯುವ ಡೈಲಾಗ್ ಇದೆ. ಅದನ್ನ ಉದ್ದೇಶಿಸಿ ಅನಸೂಯ ಈ ಕಾಮೆಂಟ್ ಮಾಡಿದ್ದಾರೆಂದು ಮಾಸ್ ಹೀರೋ ಅಭಿಮಾನಿಗಳು ಇದೀಗ ಆಕೆಯ ಬೆವರಿಳಿಸುತ್ತಿದ್ದಾರೆ.
అమ్మని అన్న ఉసురు ఊరికే పోదు. కర్మ.. కొన్నిసార్లు రావటం లేటవ్వచ్చేమో కాని రావటం మాత్రం పక్కా!!#NotHappyOnsomeonesSadness but #FaithRestored
— Anasuya Bharadwaj (@anusuyakhasba) August 25, 2022
ಸಿನಿಮಾ ಪರವಾಗಿ ಹಾಗೂ ಆಕೆಯ ವೈಯಕ್ತಿಕ ವಿಚಾರಗಳನ್ನು ತೆಗೆದು ನಿನ್ನೆಯಿಂದ ಟ್ವಿಟ್ಟರ್ನಲ್ಲಿ ಟ್ರೋಲ್ ಮಾಡ್ತಿದಾರೆ. ನೀನು ಆಂಕರ್ ಆಗಿ ಶೋಗಳಲ್ಲಿ ನಿನ್ನ ನಡವಳಿಕೆ, ಬಟ್ಟೆ ಇದೆಲ್ಲವನ್ನು ನೋಡಿಕೋ…ಎರಡು ಮಕ್ಕಳ ತಾಯಿ ನೀನು ಆಂಟಿ ಆಗಿದ್ದೀಯಾ ಎಂದು ಟ್ರೋಲ್ ಮಾಡ್ತಿದಾರೆ. ಇದಕ್ಕೆಲ್ಲವೂ ಉತ್ತರ ಕೊಟ್ಟ ಅನಸೂಯ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಸೈಬರ್ ಕ್ರೈಂ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಕಮೆಂಟ್ ಮಾಡಿರುವ ಪ್ರತಿಯೊಬ್ಬರಿಗೂ ತಮ್ಮದೇ ದಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ.