ತಮಿಳುನಾಡು ಮಾಜಿ ಸಿಎಂ ಜಯಾ ಸಾವು: ಸರ್ಕಾರಕ್ಕೆ ಆಯೋಗದಿಂದ ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಗೂಢ ಸಾವು ಪ್ರಕರಣದ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಆರುಮುಘಸ್ವಾಮಿ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಆರುಮುಘಸ್ವಾಮಿ, ಸುಮಾರು 150 ಸಾಕ್ಷಿಗಳನ್ನು ಕೇಳಿದ ನಂತರ 500 ಪುಟಗಳ ಇಂಗ್ಲೀಷ್ ಮತ್ತು 600 ಪುಟಗಳ ತಮಿಳು ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಸಾವಿನ ಕೆಲವು ದಿನಗಳ ಮುನ್ನ ಅಪೋಲೊ ಆಸ್ಪತ್ರೆಯಿಂದ ಜಯಲಲಿತಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು ಬಳಿಕ ಇದ್ದಕ್ಕಿಂದಂತೆ ಅವರ ಆರೋಗ್ಯ ಹದಗೆಟ್ಟಿದ್ದು, ಡಿಸೆಂಬರ್ 2016 ರಂದು ರಾತ್ರಿ 11.30 ಕ್ಕೆ ಚೆನ್ನೈ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!