ಹೊಸದಿಗಂತ ವರದಿ ವಿಜಯಪುರ:
ಯುವತಿಯನ್ನು ಪ್ರೀತಿಸಿ ಮನೆಬಿಟ್ಟು ಹೋಗಿದ್ದಕ್ಕೆ ಯುವಕನ ತಂದೆ, ತಾಯಿ ಮೇಲೆ ಯುವತಿಯ ಮನೆಯವರು ಹಲ್ಲೆಗೈದಿರುವ ಆರೋಪ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ಕೇಳಿಬಂದಿದೆ.
ಪ್ರೇಮಿಗಳಾದ ಅಮರ್ (22) ಅರ್ಚನಾ (24) ಮನೆ ಬಿಟ್ಟು ಹೋದವರು. ಆದರೆ, ಅಮರ್ ತಂದೆ ಗೋರಖನಾಥ್ ಚವ್ಹಾಣ, ತಾಯಿ ಕವಿತಾ ಮೇಲೆ ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ಹಲ್ಲೆಗೈದಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ. ಹೀಗಾಗಿ ಅಜ್ಞಾತ ಸ್ಥಳದಿಂದ, ನಮ್ಮ ಕುಟುಂಬದವರನ್ನು ರಕ್ಷಣೆ ಮಾಡಿ ಎಂದು ಪೊಲೀಸರಿಗೆ ಪ್ರೇಮಿಗಳಾದ ಅಮರ್ ಹಾಗೂ ಅರ್ಚನಾ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ