ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ದೀಪಾವಳಿ ಹಬ್ಬ ಸಂಭ್ರಮದ ಭರದಲ್ಲಿ ಪಟಾಕಿಯಿಂದ ಅವಘಡಗಳೂ ಹೆಚ್ಚಾಗುತ್ತಿದೆ.ಇದೀಗ ಪಟಾಕಿ ಸಿಡಿಸಿಲು ಹೋಗಿ ಮತ್ತೋರ್ವ ಯುವಕ ಕಣ್ಣಿಗೆ ಪೆಟ್ಟು ಮಾಡಿಕೊಂಡ ಘಟನೆ ಬೆಂಗಳೂರಿನ ಶ್ರೀನಗರದಲ್ಲಿ ನಡೆದಿದೆ.
ಗಾಯಾಳುಗೆ ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು,ಇದುವರೆಗೆ ಐವರು ಪಟಾಕಿಯಿಂದ ಗಾಯಗೊಂಡ ಐವರು ಗಾಯಾಳುಗಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ.