ಹೊಸದಿಗಂತ ವರದಿ ಧಾರವಾಡ:
ಆಮ್ ಆದ್ಮಿ ಪಕ್ಷದ ವತಿಯಿಂದ ನ. 26ರಂದು ನಗರದ ಕಡಪಾ ಮೈದಾನದಲ್ಲಿ ನನ್ನ ನಡೆ ಸಂವಿಧಾನದೆಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಕ್ಷದ ಸಂಯೋಜಕ ಪ್ರವೀಣಕುಮಾರ ನಡಕಟ್ಟಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ಮೂಲಕ ತೆರಳಿ ಸಂವಿಧಾನದ ಪ್ರಸ್ತಾವನೆಯನ್ನು ಓದಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಇಜಾಜ್ ಅಹ್ಮದ್ ಶೇಖ್, ಫಕ್ಕೀರೇಶ, ಜಯಂತ್ ಶೆಟ್ಟಿ, ನಿಕಿತಾ ಇದ್ದರು.