ʼಅವನು ನನ್ನ ತುಂಡುತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕುತ್ತಾನೆʼ: 2020 ರಲ್ಲೇ ಪೊಲೀಸರಿಗೆ ಪತ್ರ ಬರೆದಿದ್ದಳು ಶ್ರದ್ಧಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಿಯಕರ ಅಫ್ತಾಬ್ ಪೂನಾವಾಲಾ ಕತ್ತು ಹಿಸುಕಿ, ದೇಹವನ್ನು ತುಂಡಾಗಿ ಕತ್ತರಿಸಿ, ದೆಹಲಿಯ ಕಾಡಿನಲ್ಲಿ ಎದೆಯಲ್ಪಟ್ಟಿದ್ದ ಹಿಂದೂ ಯುವತಿ ಶ್ರದ್ಧಾ ವಾಕರ್, ನಿಖರವಾಗಿ ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ತನ್ನ ತವರು ನೆಲ ವಸಾಯಿಯ ಪೊಲೀಸರಿಗೆ ʼಅಫ್ತಾಬ್‌ ತನ್ನನ್ನು ತುಂಡುತುಂಡಾಗಿ ಕತ್ತರಿಸುವುದಾಗಿ ಬೆದರಿಸುತ್ತಿದ್ದಾನೆʼ ಎಂದು ದೂರು ನೀಡಿದ್ದ ವಿಚಾರ ಬೆಳಗಕಿಗೆ ಬಂದಿದೆ.
ಅವರಿಬ್ಬರು ವಾಸವಿದ್ದ ಫ್ಲಾಟ್‌ನಲ್ಲಿ ಆತ ಆಕೆಯನ್ನು ಥಳಿಸಿದ ಬಳಿಕ ಅವಳು ಪೊಲೀಸರಿಗೆ ದೂರು ಬರೆದಿದ್ದಳು. ಮತ್ತು ಅವನ ಹಿಂಸಾತ್ಮಕ ನಡವಳಿಕೆಗಳ ಬಗ್ಗೆ ಅವನ ಕುಟುಂಬಕ್ಕೂ ತಿಳಿದಿತ್ತು ಎಂದು ದೆಹಲಿ ಪೋಲೀಸ್ ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಈ ದೂರನ್ನು ಪರಿಶೀಲಿಸುತ್ತಿದ್ದಾರೆ.
2020 ರ ನವೆಂಬರ್ 23 ರಂದು ಶ್ರದ್ಧಾ ಈ ಪತ್ರವನ್ನು ಬರೆದಿದ್ದಾಳೆ. ಅದೇ ಸಂದರ್ಭದಲ್ಲಿ ತನಗೆ ಅಫ್ತಾಬ್‌ ನಿಂದ ಮೂಗಿಗೆ ಏಟು ಬಿದ್ದಿರುವ ಮುಖದ ಫೋಟೋವನ್ನು ಸಹೋದ್ಯೋಗಿ ಕರಣ್‌ ಜೊತೆಗೆ ಹಂಚಿಕೊಂಡಿದ್ದಳು .ಒಂದು ವಾರದ ನಂತರ ಆಕೆಯನ್ನು “ಆಂತರಿಕ ಗಾಯಗಳೊಂದಿಗೆ” ಆಸ್ಪತ್ರೆಗೆ ದಾಖಲಿಸಲಾಗಿತ್ತು.
” ಅವನು ಇಂದು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ. ಆ ಬಳಿಕ ಕೊಂದು ಹಾಕುವುದಾಗಿ ನನ್ನನ್ನು ಹೆದರಿಸಿದ. ಅವನು ತುಂಡು ತುಂಡಾಗಿ ಕತ್ತರಿಸಿ ಬಿಸಾಡುತ್ತೇನೆ ಎಂದಾಗ ನನಗೆ ಮತ್ತಷ್ಟು ಹೆದರಿಕೆಯಾಯಿತು. ಅವನು ನನ್ನ ಮೇಲೆ ಹಲ್ಲೆ ನಡೆಸುತ್ತ ಆರು ತಿಂಗಳಾಗಿದೆ, ಆದರೆ ಪೊಲೀಸರ ಬಳಿ ನೇರವಾಗಿ ಹೋಗಲು ಧೈರ್ಯವಿಲ್ಲ, ಏಕೆಂದರೆ ಅವನು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾನೆ, ”ಎಂದು ಪತ್ರದಲ್ಲಿ ಹೇಳಲಾಗಿದೆ.
“ಇನ್ನು ಮುಂದೆ ನಾನು ಅವನೊಂದಿಗೆ ವಾಸಿಸಲು ಸಿದ್ಧಳಿಲ್ಲ, ಅವನು ನನ್ನನ್ನು ಕೊಲ್ಲಲು ಹಾಗೂ ನೋಯಿಸಲು ಬ್ಲ್ಯಾಕ್‌ಮೇಲ್ ಮಾಡುತ್ತಿರುವುದರಿಂದ ಅವನಿಂದ ನನಗಾಗುವ ಯಾವುದೇ ರೀತಿಯ ದೈಹಿಕ ಹಾನಿಯನ್ನು ಪರಿಗಣಿಸಬೇಕು ಎಂದು ಕೋರಿ ಪತ್ರವನ್ನು ಮುಕ್ತಾಯಗೊಳಿಸಲಾಗಿದೆ.
ಅವರಿಬ್ಬರು 2019 ರ ಸುಮಾರಿಗೆ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾಗಿ ಸಂಬಂಧವನ್ನು ಬೆಳೆಸಿದ್ದರು. 2020 ರಲ್ಲೇ ಅಫ್ತಾಬ್‌ ಆಕೆಗೆ ಬೆದರಿಕೆ ಹಾಕುತ್ತಾ ಆಕೆಯ ಮೇಲೆ ಹಲ್ಲೆ ಮತ್ತು ಬ್ಲಾಕ್‌ಮೇಲ್ ಮಾಡುತ್ತಿದ್ದ. ಹಾಗಿದ್ದರೂ ಅವಿಬ್ಬರ ಸಂಬಂಧ ಪೂರ್ತಿಯಾಗಿ ಮುರಿದುಹೋಗಲಿಲ್ಲ. ಕಾಲ್ ಸೆಂಟರ್ ಉದ್ಯೋಗಿಗಳಾಗಿರುವ ಇಬ್ಬರೂ ಈ ವರ್ಷ ಮೇ ತಿಂಗಳಲ್ಲಿ ದೆಹಲಿಗೆ ತೆರಳಿದ್ದರು.
ಶ್ರದ್ಧಾ ಅವರ ಪೋಷಕರು ಅಂತರ-ಧರ್ಮೀಯ (ಹಿಂದೂ-ಮುಸ್ಲಿಂ) ಸಂಬಂಧವನ್ನು ಒಪ್ಪದ ಕಾರಣ ಆಕೆಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಇದರಿಂದ ಶ್ರದ್ಧಾಗೆ ಬೇರೆ ಆಯ್ಕೆ ಇರಲಿಲ್ಲ. ಮೇ ತಿಂಗಳಲ್ಲಿ ದೆಹಲಿಯ ಮೆಹ್ರೌಲಿಯಲ್ಲಿರುವ ಫ್ಲಾಟ್‌ಗೆ ಸ್ಥಳಾಂತರಗೊಂಡ ಕೆಲವು ದಿನಗಳ ನಂತರ ಶ್ರದ್ಧಾ ಭೀಕರ ಹತ್ಯೆ ನಡೆದಿತ್ತು.
ಅವರು ಎಷ್ಟು ಸಮಯದವರೆಗೆ ಬೇರೆಯಾಗಿ ವಾಸಿಸುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ, ಆದರೆ ದೆಹಲಿಗೆ ತೆರಳುವ ಮೊದಲು ಅವರು ಈ ವರ್ಷದ ಆರಂಭದಲ್ಲಿ ಹಿಮಾಚಲ ಪ್ರದೇಶಕ್ಕೆ ರಜೆಗಾಗಿ ಒಟ್ಟಿಗೆ ಹೋದಾಗ ಮತ್ತೆ ಸಂಬಂಧ ಸುಧಾರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!