ಹೊಸದಿಗಂತ ವರದಿ,ಕೆ.ಆರ್.ಪೇಟೆ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಾಲೂಕಿನಲ್ಲಿರುವ ಸ್ವಗ್ರಾಮ ಬೂಕನಕೆರೆಗೆ ಆಗಮಿಸಿ ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದೇವತೆ ಗೋಗಾಲಮ್ಮನವರ 18 ನೇ ವರ್ಷದ ವಿಶೇಷ ಪೂಜಾ ಮಹೋತ್ಸವದ ಅಂಗವಾಗಿ ಗ್ರಾಮಸ್ಥರು ಕಡೆಯ ಕಾರ್ತೀಕ ಮಾಸದ ಅಂಗವಾಗಿ ಕಳೆದ ಸೋಮುವಾರ ಲಕ್ಷ ದೀಪೋತ್ಸವ ಮತ್ತು ಅನ್ನ ಸಂತರ್ಪಣೆ ಕಾರ್ಯಗಳನ್ನು ನೆರವೇರಿಸಿದ್ದರು.
ಇಂದು ಕಾರ್ತೀಕ ಅಮಾವಾಸ್ಯೆಯ ಅಂಗವಾಗಿ ಗೋಗಾಲಮ್ಮನಿಗೆ ವಿಸೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮದೇವತೆ ಗೋಗಾಲಮ್ಮನ ವಿಶೇಷ ಪೂಜಾ ಕಾರ್ಯಕ್ಕೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಗ್ರಾಮದ ಮಗ ಬಿ.ಎಸ್.ಯಡಿಯೂರಪ್ಪ ಬೂಕನಕೆರೆ ಗೆ ಆಗಮಿಸುತ್ತಿದ್ದಂತೆಯೇ ಗ್ರಾಮದ ಜನ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ಜಯಕಾರ ಹಾಕಿದರು. ಗ್ರಾಮಸ್ಥರ ಜಯಘೋಷಗಳ ನಡುವೆಯೇ ಗೋಗಾಲಮ್ಮನ ಸನ್ನಿಧಿಗೆ ಆಗಮಿಸಿದ ಯಡಿಯೂರಪ್ಪ ಗ್ರಾಮ ದೇವತೆಗೆ ಕೈಮುಗಿದು ನಿಂತರು. ವಿಶೇಷ ಪೂಜಾ ಕಾರ್ಯಗಳ ಅನಂತರ ಗ್ರಾಮದಲ್ಲಿರುವ ತಮ್ಮ ಅಣ್ಣನ ಮನೆಗ ತೆರಳಿ ಕುಟುಂಬಸ್ತರ ಯೋಗಕ್ಷೇನ ವಿಚಾರಿಸಿ ಕೆಲಕಾಲ ವಿಶ್ರಾಂತಿ ಪಡೆದರು.
ಸಚಿವ ಕೆ.ಸಿ.ನಾರಾಯಣಗೌಡ, ಗ್ರಾಮ ಮುಖಂಡರಾದ ಬಿ.ಜವರಾಯಿಗೌಡ, ಹುಲ್ಲೇಗೌಡ, ಮೀನಾಕ್ಷಿ ಪುಟ್ಟರಾಜು, ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಬೂಕನಕೆರೆ ಮಧುಸೂದನ್ ಮತ್ತಿತರರು ಯಡಿಯೂರಪ್ಪ ಅವರೊಂದಿಗಿದ್ದು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.