ಹೊಸದಿಗಂತ ವರದಿ, ತುಮಕೂರು:
ತಿಪಟೂರುನಗರದಲ್ಲಿ ವಿನಾಯಕ ನಗರದಿಂದ ಇಂದಿರಾನಗರಕ್ಕೆ ಹೋಗುವ ರೈಲ್ವೆ ಕೆಳಸೇತುವೆ ಬಳಿ ಶುಕ್ರವಾದ ಸಂಜೆ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಶುಕ್ರವಾರ ಅಲ್ಲಿನ ನಿವಾಸಿಗಳು ಚಿರತೆ ರಸ್ತೆ ದಾಟುವುದನ್ನು ಗಮನಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಶೀಘ್ರವೇ ಚಿರತೆ ಪತ್ತೆಗೆ ಮುಂದಾಗಬೇಕು ಎಂದು ಇಂದಿರಾನಗರ, ವಿನಾಯಕನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ವಿನಾಯಕ ನಗರದ ಬಳಿಯಿಂದ ಚಿರತೆ ಹಾದು ಹೋಗಿರುವ ಬಗ್ಗೆ ಮಾಹಿತಿ ದೊರೆತಿದ್ದು ಸ್ಥಪರಿಶೀಲನೆ ಮಾಡುತ್ತಿದ್ದೇವೆ. ಸ್ಥಳೀಯ ನಿವಾಸಿಗಳು ಸ್ವಲ್ಪ ಎಚ್ಚರಿಕೆ ವಹಿಸುವ ಅಗತ್ಯವಿದೆ. ಚಿರತೆ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರ್.ಎಫ್.ಓ. ಜಗದೀಶ್ ತಿಳಿಸಿದ್ದಾರೆ.