ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಎಸ್ಆರ್ ಟಿಸಿ ಬಸ್ ಡಿಪೋ ಜಾಗದ ಬಾಡಿಗೆ ಪಾವತಿಸದ ಕಾರಣ, ನೋಟಿಸ್ ನೀಡಿದ್ದ ಅಧಿಕಾರಿಗೆ ಮಹಿಳೆಯೊಬ್ಬಳು ಮಚ್ಚು ತೋರಿಸಿ ಧಮ್ಕಿ ಹಾಕಿ ರಂಪಾಟ ನಡೆಸಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಶಫಿ ಅಹಮದ್ ಎಂಬಾತನ ಪತ್ನಿಯೇ ಮಚ್ಚು ಹಿಡಿದು ಅಧಿಕಾರಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದವಳು.
ಮೈಸೂರಿನ ಸಾತಗಳ್ಳಿ ಬಸ್ ಡಿಪೋದಲ್ಲಿ ಶಫಿ ಅಹಮದ್ ಎಂಬಾತ ಬಾಡಿಗೆಗೆ ಜಾಗ ಪಡೆದಿದ್ದನು. ಡಿಪೋ ಕಟ್ಟಡದ ಜಾಗದಲ್ಲಿ ಕಾಲೇಜು ನಡೆಸುತ್ತಿದ್ದನು. ಆದರೆ ಬಾಡಿಗೆ ನೀಡದ ಕಾರಣ ಕೆಎಸ್ಆರ್ ಟಿಸಿ ಅಧಿಕಾರಿಗಳು ಶಫಿ ಅಹಮದ್ಗೆ ನೋಟಿಸ್ ಕೊಟ್ಟಿದ್ದರು.
ಇದರಿಂದ ಸಿಡಿದೆದ್ದ ಶಫಿ ಅಹಮದ್ ಪತ್ನಿ ಮಚ್ಚು ಹಿಡಿದು ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾಳೆ. ನಮ್ಮನ್ನು ಎದುರು ಹಾಕಿಕೊಂಡರೆ ಕೊಚ್ಚಿ ಹಾಕಿಬಿಡುತ್ತೇವೆ ಅಂತ ಕೊಲೆ ಬೆದರಿಕೆ ಹಾಕಿದ್ದಾಳೆ. ಮಚ್ಚು ಹಿಡಿದು ನಿಂತು ಆರ್ಭಟಿಸಿದ ಆಕೆಯ ವರ್ತನೆ ನೋಡಿ ಕೆಎಸ್ಆರ್ ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶಾಕ್ ಆದರು.
ಈ ಸಂಬoಧ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮೈಸೂರಿನ ಉದಯಗಿರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಶಫಿ ಅಹಮದ್ ಹಾಗೂ ಆತನ ಪತ್ನಿ ಎಸ್ಕೇಪ್ ಆಗಿದ್ದಾರೆ.