ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂಬರುವ ಶ್ರೀಲಂಕಾ ವಿರುದ್ಧದ ಮುಂಬರುವ ತವರಿನ ಏಕದಿನ ಹಾಗೂ ಟಿ 20 ಸರಣಿಗೆ ಭಾರತೀಯ ತಂಡವನ್ನು ನಿರ್ಗಮಿಸುತ್ತಿರುವ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆ ಮಾಡಲಿದ್ದು, ಈ ವಾರ ತಂಡ ಘೋಷಣೆಯಾಗಲಿದೆ. ಈ ಸರಣಿಯು ಜನವರಿ 3 ರಿಂದ ಪ್ರಾರಂಭವಾಗಿಲಿದೆ.
ಗಾಯಾಳು ರೋಹಿತ್ ಶರ್ಮಾ ಗುಣಮುಖರಾಗದಿರುವುದರಿಂದ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ಕೆಎಲ್ ರಾಹುಲ್ ಗೆ ತಂಡದಿಂದ ಕೋಕ್ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಹಾಗೂ ಕೆಲವು ಆಟಗಾರರಿಗೆ ಟಿ 20 ಸ್ವರೂಪದಿಂದ ವಿಶ್ರಾಂತಿ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ