ಹೊಸ ದಿಗಂತ ವರದಿ, ಮೈಸೂರು:
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅನಾರೋಗ್ಯದಿಂದಾಗಿ ಅಹಮದಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಹಿನ್ನೆಲೆಯಲ್ಲಿ ತಾಯಿ ಬೇಗ ಗುಣಮುಖರಾಗಲೆಂದು ಪ್ರಹ್ಲಾದ್ ಮೋದಿ ಅವರು, ಬುಧವಾರ ಸಂಜೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ್ದಾರೆ.
ನಗರದ ಜೆಎಸ್ಎಸ್ ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರಹ್ಲಾದ್ ಮೋದಿ ,ಪತ್ನಿ, ಪುತ್ರ, ಅಳಿಯ ಸೇರಿದಂತೆ ಕುಟುಂಬದವರೊoದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಬಳಿಕ ಮೈಸೂರಿನ ಹೊರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಗುಜರಾತ್ಗೆ ತೆರಳಿದರು. ಅವರಿಗೆ ಸಚಿವರುಗಳಾದ ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಅವರು ಬೀಳ್ಕೋಡುಗೆ ನೀಡಿದರು.
ಗುಜರಾತ್ಗೆ ತೆರಳಿದ ಬಳಿಕ ಪ್ರಹ್ಲಾದ್ ಮೋದಿ ಹಾಗೂ ಗಾಯಾಳುಗಳು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಅದಕ್ಕೂ ಮುನ್ನಾ ಹೀರಾಬೆನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ, ತಾಯಿಯ ಆರೋಗ್ಯ ವಿಚಾರಿಸಿಕೊಳ್ಳಲಿದ್ದಾರೆ.