12 ಲಕ್ಷ ಸಾಲಕ್ಕೆ 40 ಲಕ್ಷ ಕಟ್ಟುವಂತೆ ಒತ್ತಾಯ: ದಿಕ್ಕು ತೋಚದೆ ಸಾಮೂಹಿಕ ಆತ್ಮಹತ್ಯೆಗೈದ ಕುಟುಂಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದ ಕುರಿಂಕುಳಂನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರಮೇಶನ್ ಅವರು ವಿವಿಧ ಉದ್ದೇಶಗಳಿಗಾಗಿ ಖಾಸಗಿ ವ್ಯಕ್ತಿಗಳಿಂದ 12 ಲಕ್ಷ ರೂ. ಸಾಲ ಮಾಡಿದ್ದು, ಬಡ್ಡಿ ಸೇರಿ 40 ಲಕ್ಷ ರೂಪಾಯಿಗೆ ಕಟ್ಟುವಂತೆ ಒತ್ತಾಯಿಸಲಾಯಿತು. ಆಸ್ತಿ, ಮನೆ ಮಾರಿ ಸಾಲ ತೀರಿಸಲು ಯತ್ನಿಸಿದರೂ ಫಲಕಾರಿಯಾಗದೆ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

ಕರಿಂಕುಳಂ ಪಶ್ಚಿಮ ಮೂಲೆಯಲ್ಲಿರುವ ಚಿರಕ್ಕಲ್ ಕಾರ್ತಿಕ ಎಂಬವರ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡು ರಮೇಶ (48), ಅವರ ಪತ್ನಿ ಸುಲಜಾ ಕುಮಾರಿ (46) ಮತ್ತು ಪುತ್ರಿ ರೇಷ್ಮಾ (23) ಮೃತಪಟ್ಟಿದ್ದಾರೆ.

ಹಣವನ್ನು ಮರುಪಾವತಿಸಲು ರಮೇಶ ಗಲ್ಫ್ಗೆ ತೆರಳಿದ್ದರು. ಆದರೆ, ಇಷ್ಟು ದೊಡ್ಡ ಮೊತ್ತದ ಬಡ್ಡಿಯನ್ನು ಸಂಬಳದಿಂದ ಮರುಪಾವತಿಸಲು ಸಾಧ್ಯವಾಗಲಿಲ್ಲ. ಸಾಲ ಕೊಟ್ಟ ಕೆಲವರು ಆಸ್ತಿ, ಮನೆ ಮಾರಿ ಹಣ ವಾಪಸ್ ನೀಡುವುದಕ್ಕೆ ಒಪ್ಪಲಿಲ್ಲ. ಹಣ ಬದಲು ಜಮೀನು ಬಿಟ್ಟು ಕೊಡುವಂತೆ ಕೆಲವರು ಪ್ರಕರಣ ದಾಖಲಿಸಿದ್ದರಿಂದ ಮನೆ, ಜಮೀನು ಖರೀದಿಸಲು ಬಂದವರು ಮನೆ, ಜಮೀನು ಖರೀದಿಯಿಂದ ಹಿಂದೆ ಸರಿದರು ಸಾಲ ತೀರಿಸಲು ಯತ್ನಿಸಿದರೂ ಸಾಧ್ಯವಾಗದೇ ದಿಕ್ಕು ತೋಚದಂತೆ ಆಗಿದ್ದು, ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!