ಹೊಸದಿಗಂತ ವರದಿ ವಿಜಯಪುರ:
ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ ಬಾಗಲಕೋಟಯ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಭಾನುವಾರ
ವಿಸರ್ಜನೆ ಮಾಡಲಾಯಿತು.
ಇಲ್ಲಿನ ಜ್ಞಾನ ಯೋಗಾಶ್ರಮದಿಂದ ಅಸ್ಥಿಯೊಂದಿಗೆ ಹೊರಟ ಮಠಾಧೀಶರ, ಭಕ್ತರ ವಾಹನಗಳು ಬೆಳಗ್ಗೆ ಕೂಡಲ ಸಂಗಮ ತಲುಪಿದವು. ಕೂಡಲ ಸಂಗಮದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವು ಪೂಜ್ಯರು ನದಿ ದಂಡೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡು,
ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರಮುಖ ಮಠಾಧೀಶರು ಬೋಟ್ ಮೂಲಕ ತ್ರಿವೇಣಿ ಸಂಗಮದತ್ತ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಭಕ್ತಿ ಭಾವದಿಂದ ಕೈ ಮುಗಿದರು. ಈ ಮೂಲಕ ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಲಾಯಿತು.