ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಗೆಳೆಯನನ್ನು ಕೊಂದು ಆತನ ಶವವನ್ನು ಎಸೆಯಲು ಹೋಗಿದ್ದಾಗ ಆಯತಪ್ಪಿ ಬಿದ್ದು ತಾನೂ ಹೆಣವಾಗಿ ಹೋದ.
ಕೊಲ್ಹಾಪುರ-ಸಾವಂತಾಡಿ ಮಾರ್ಗದಲ್ಲಿನ ಅಂಬೋಲಿ ಘಾಟ್ನಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರದ್ ಎಂಬಲ್ಲಿನ ನಿವಾಸಿ ಭೌಸೊ ಮಾನೆ ಬಿದ್ದು ಸಾವಿಗೀಡಾದ ಕೊಲೆಗಾರ. ಸುಶಾಂತ್ ಖಿಲ್ಲಾರೆ ಎಂಬಾತ ಈತನಿಂದ ಕೊಲೆಗೀಡಾದ ಸ್ನೇಹಿತ. ಹಣದ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಕೊನೆಗೆ ಇಬ್ಬರೂ ಸಾವಿಗೀಡಾದರು.
ಭಾನುವಾರ ಹಣದ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿತ್ತು. ಇದು ಸುಶಾಂತ್ನ ಕೊಲೆಯಲ್ಲಿ ಕೊನೆಯಾಗಿದ್ದು, ಬಳಿಕ ಆತನ ಶವವನ್ನು ಅಂಬೋಲಿ ಘಾಟ್ನಲ್ಲಿ ಎಸೆದು ಕೊಲೆ ಪ್ರಕರಣ ಮುಚ್ಚಿಡುವ ಪ್ಲ್ಯಾನ್ ಮಾಡಲಾಗಿತ್ತು.ಹೀಗಾಗಿ ಮಾನೆ ಮತ್ತು ಪವಾರ್ ಇಬ್ಬರೂ ಸುಮಾರು 400 ಕಿ.ಮೀ. ಪ್ರಯಾಣಿಸಿ ಅಂಬೋಲಿ ಘಾಟ್ಗೆ ಬಂದಿದ್ದರು. ಇಲ್ಲಿ ಶವವನ್ನು ಎಸೆಯುವಾಗ ಮಾನೆ ಆಯತಪ್ಪಿ ತಾನೂ ಘಾಟ್ನಿಂದ 150 ಅಡಿ ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿದ್ದ. ಇದರಲ್ಲಿ ಪವಾರ್ ಪವಾಡಸದೃಶವಾಗಿ ಪಾರಾಗಿದ್ದು, ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದ.
ಸತ್ತವರಿಬ್ಬರ ಶವವೂ ಹತ್ತು ಅಡಿ ಅಂತರದಲ್ಲಿ ಬಿದ್ದಿದ್ದವು.