ಹೊಸದಿಗಂತ ವರದಿ ಶಿವಮೊಗ್ಗ:
ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿಮೋದಿ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ಜನ ಸಮೂಹದಿಂದಾಗಿ ಎಲ್ಲೆಡೆಸಂಚಾರ ಅಸ್ತವ್ಯಸ್ತವಾಗಿದೆ.
ಕಿಲೋಮೀಟರ್ ಗಟ್ಟಲೆ ಬಸ್, ಟಿಟಿ, ಕಾರುಗಳು ನಿಂತಿದ್ದು, ಸಮಾವೇಶ ಸ್ಥಳಕ್ಕೆ ಹೋಗಲು ಜನರು ಹರಸಾಹಸಪಡುತ್ತಿದ್ದಾರೆ. ಸಮಾವೇಶ ಸ್ಥಳಕ್ಕೆ ತೆರಳುವ ವಿದ್ಯಾನಗರ,ಬೈಪಾಸ್ ರಸ್ತೆಗಳಲ್ಲಿ ಸುಮಾರು 10 ಕಿಮಿ ದೂರವಾಹನಗಳು ನಿಂತಿವೆ. ಸಂಚಾರ ನಿಯಂತ್ರಣದಲ್ಲಿ ಪೊಲೀಸರು ಹೈರಾಣಾಗಿದ್ದಾರೆ.