ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ವಿಕೆಟ್ಕೀಪರ್ ರಿಷಭ್ ಪಂತ್ (Rishabh Pant) ಕಾರು ಅವಘಡದಲ್ಲಿ ಗಾಯಗೊಂಡು ಮನೆಯಲ್ಲಿದ್ದಾರೆ.ಇದೀಗ ಅವರ ಆರೋಗ್ಯದ ಕುರಿತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.
ಮಾಜಿ ಕ್ರಿಕೆಟಿಗ ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಉತ್ತರ ಕೊಟ್ಟಿದ್ದಾರೆ.
ಐಪಿಎಲ್ನಲ್ಲಿ ರಿಷಭ್ ಪಂತ್ ಅವರ ಸ್ಥಾನಕ್ಕೆ ಸೂಕ್ತ ಪರ್ಯಾಯ ಹುಡುಕುವುದು ಸುಲಭವಲ್ಲ. ಫ್ರಾಂಚೈಸಿ ಕೂಡ ಪರ್ಯಾಯ ಆಟಗಾರ ಯಾರೆಂದು ತಿಳಿಸಿಲ್ಲ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಜತೆ ಒಂದೆರಡು ಬಾರಿ ಮಾತುಕತೆ ನಡೆಸಿದ್ದೇನೆ. ಅವರಿಗೆ ಗಂಭೀರ ಗಾಯಗಳಾಗಿವೆ. ಅತಿ ಸೂಕ್ಷ್ಮ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ ಒಂದು ವರ್ಷ ಅಥವಾ ಎರಡು ವರ್ಷ ಅವಧಿಯಲ್ಲಿ ತಂಡಕ್ಕೆ ಮರಳಬಹುದು ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಉಳಿದಿದೆ. ಈಗಷ್ಟೇ ನಮ್ಮ ಕ್ಯಾಂಪ್ ಆರಂಭಗೊಂಡಿದೆ. ಸತತ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವ ಕಾರಣ ಅವರೆಲ್ಲರೂ ಏಕಾಏಕಿ ತಂಡಕ್ಕೆ ಲಭ್ಯರಾಗುವುದಿಲ್ಲ. ನಾಲ್ಕರಿಂದ ಐದು ಆಟಗಾರರು ಇರಾನಿ ಕಪ್ನಲ್ಲಿ ಆಡುತ್ತಿದ್ದಾರೆ. ಸರ್ಫರಾಜ್ ಖಾನ್ ಬೆರಳು ಮುರಿದಿದೆ. ಅವರೂ ಸದ್ಯಕ್ಕೆ ಕ್ಯಾಂಪ್ಗೆ ಬರುವುದಿಲ್ಲ ಎಂದು ಗಂಗೂಲಿ ಹೇಳಿದರು.
ತಮ್ಮೂರು ರೂರ್ಕಿಗೆ ಹೋಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಘಟನೆಯಲ್ಲಿ ರಿಷಭ್ ಪಂತ್ ಅವರ ಮಂಡಿಗೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಜತೆಗೆ ಬೆನ್ನಿಗೂ ಸುಟ್ಟ ಗಾಯಗಳವಾಗಿವೆ. ಹಣೆಗೂ ಪೆಟ್ಟಾಗಿದೆ. ಅಪಘಾತದ ಗಂಭೀರತೆಯನ್ನು ನೋಡಿದರೆ ಅವರ ಪ್ರಾಣ ಉಳಿದದ್ದೇ ಅದೃಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು.