ಪಂತ್ ಟೀಮ್ ಇಂಡಿಯಾ ತಂಡಕ್ಕೆಕ್ಕೆ ವಾಪಸಾಗಲು ಎಷ್ಟು ಸಮಯಬೇಕು?: ಗಂಗೂಲಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ತಂಡದ ವಿಕೆಟ್​ಕೀಪರ್ ​ ರಿಷಭ್​ ಪಂತ್​ (Rishabh Pant) ಕಾರು ಅವಘಡದಲ್ಲಿ ಗಾಯಗೊಂಡು ಮನೆಯಲ್ಲಿದ್ದಾರೆ.ಇದೀಗ ಅವರ ಆರೋಗ್ಯದ ಕುರಿತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಮಾಹಿತಿ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ಇನ್ನೂ ಎರಡು ವರ್ಷ ಬೇಕಾಗಬಹುದು ಎಂದು ಉತ್ತರ ಕೊಟ್ಟಿದ್ದಾರೆ.
ಐಪಿಎಲ್​ನಲ್ಲಿ ರಿಷಭ್​ ಪಂತ್​ ಅವರ ಸ್ಥಾನಕ್ಕೆ ಸೂಕ್ತ ಪರ್ಯಾಯ ಹುಡುಕುವುದು ಸುಲಭವಲ್ಲ. ಫ್ರಾಂಚೈಸಿ ಕೂಡ ಪರ್ಯಾಯ ಆಟಗಾರ ಯಾರೆಂದು ತಿಳಿಸಿಲ್ಲ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಜತೆ ಒಂದೆರಡು ಬಾರಿ ಮಾತುಕತೆ ನಡೆಸಿದ್ದೇನೆ. ಅವರಿಗೆ ಗಂಭೀರ ಗಾಯಗಳಾಗಿವೆ. ಅತಿ ಸೂಕ್ಷ್ಮ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ. ಹೀಗಾಗಿ ಒಂದು ವರ್ಷ ಅಥವಾ ಎರಡು ವರ್ಷ ಅವಧಿಯಲ್ಲಿ ತಂಡಕ್ಕೆ ಮರಳಬಹುದು ಎಂದು ಗಂಗೂಲಿ ಹೇಳಿದ್ದಾರೆ.
ಐಪಿಎಲ್​ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಉಳಿದಿದೆ. ಈಗಷ್ಟೇ ನಮ್ಮ ಕ್ಯಾಂಪ್ ಆರಂಭಗೊಂಡಿದೆ. ಸತತ ಕ್ರಿಕೆಟ್​ ಪಂದ್ಯಗಳು ನಡೆಯುತ್ತಿರುವ ಕಾರಣ ಅವರೆಲ್ಲರೂ ಏಕಾಏಕಿ ತಂಡಕ್ಕೆ ಲಭ್ಯರಾಗುವುದಿಲ್ಲ. ನಾಲ್ಕರಿಂದ ಐದು ಆಟಗಾರರು ಇರಾನಿ ಕಪ್​ನಲ್ಲಿ ಆಡುತ್ತಿದ್ದಾರೆ. ಸರ್ಫರಾಜ್​ ಖಾನ್​ ಬೆರಳು ಮುರಿದಿದೆ. ಅವರೂ ಸದ್ಯಕ್ಕೆ ಕ್ಯಾಂಪ್​ಗೆ ಬರುವುದಿಲ್ಲ ಎಂದು ಗಂಗೂಲಿ ಹೇಳಿದರು.

ತಮ್ಮೂರು ರೂರ್ಕಿಗೆ ಹೋಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ಘಟನೆಯಲ್ಲಿ ರಿಷಭ್​ ಪಂತ್​ ಅವರ ಮಂಡಿಗೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಜತೆಗೆ ಬೆನ್ನಿಗೂ ಸುಟ್ಟ ಗಾಯಗಳವಾಗಿವೆ. ಹಣೆಗೂ ಪೆಟ್ಟಾಗಿದೆ. ಅಪಘಾತದ ಗಂಭೀರತೆಯನ್ನು ನೋಡಿದರೆ ಅವರ ಪ್ರಾಣ ಉಳಿದದ್ದೇ ಅದೃಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!