ಎಂಪಿ ಅವಿನಾಶ್ ರೆಡ್ಡಿಗೆ ಹೈಕೋರ್ಟ್ ಶಾಕ್: ಸಿಬಿಐ ತನಿಖೆಗೆ ಸಹಕರಿಸುವಂತೆ ಆದೇಶ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ಸಚಿವ ವೈಎಸ್‌ ವಿವೇಕಾ ಹತ್ಯೆ ಪ್ರಕರಣದ ಆರೋಪಿಯಾಗಿರುವ ವೈಸಿಪಿ ಸಂಸದ ಅವಿನಾಶ್‌ ರೆಡ್ಡಿ ಅವರನ್ನು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಅವಿನಾಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಜಾಗೊಳಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ಪ್ರಮುಖ ಹೇಳಿಕೆಗಳನ್ನು ನೀಡಿದ್ದು, ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ.

ಯಾವುದೇ ಆಕ್ಷೇಪಣೆ ನೀಡದಂತೆ ಸಿಬಿಐ ತನಿಖೆಗೆ ಹಾಜರಾಗಬೇಕು ಎಂದು ಸಂಸದ ಅವಿನಾಶ್ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಸ್ಪಷ್ಟಪಡಿಸಿದೆ. ತನ್ನನ್ನು ತನಿಖೆಗೆ ಕರೆಯದೆ, ಅರೆಸ್ಟ್‌ ಮಾಡದಂತೆ ಸಿಬಿಐಗೆ ಆದೇಶ ನೀಡಬೇಕೆಂಬ ಮನವಿಯನ್ನು ತಿರಸ್ಕರಿಸಿದ ಕೋರ್ಟ್‌ ಅಂತಹ ಆದೇಶಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೀಠ ನೀಡಿರುವ ಈ ಆದೇಶದಿಂದ ವೈಸಿಪಿ ಸಂಸದ ಅವಿನಾಶ್ ರೆಡ್ಡಿ ತಲೆ ಕೆಡಿಸಿಕೊಂಡಿದ್ದಾರೆ. ವಿವೇಕಾ ಹತ್ಯೆ ಪ್ರಕರಣದ ಆಡಿಯೋ, ವಿಡಿಯೋ ರೆಕಾರ್ಡ್ ಮಾಡುವಂತೆ ಸಿಬಿಐಗೆ ಆದೇಶಿಸಿದೆ. ಮೇಲಾಗಿ ವಕೀಲರಿಗೆ ಕಾಣುವ ರೀತಿಯಲ್ಲಿ ತನಿಖೆ ನಡೆಸುವಂತೆ ಸಿಬಿಐಗೆ ಸೂಚನೆ ನೀಡಿದೆ. ವಿವೇಕಾ ಹತ್ಯೆ ಪ್ರಕರಣಗಳಲ್ಲಿ ತಮ್ಮ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳ ವಿರುದ್ಧ ಅವಿನಾಶ್ ರೆಡ್ಡಿ ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!