ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ವರ್ಷಗಳಿಂದ ಸಮಂತಾ ಸುದ್ದಿಯಲ್ಲಿರುವುದು ಗೊತ್ತೇ ಇದೆ. ಚೈತು ಜೊತೆ ವಿಚ್ಛೇದನ, ನಂತರ ಐಟಂ ಸಾಂಗ್, ನಂತರ ಮಯೋಸಿಟಿಸ್ ನಿಂದ ಬಳಲುತ್ತಿದ್ದೇನೆ ಎಂದು ಹೇಳುವುದು, ಈಗ ಶಾಕುಂತಲಂ ಪ್ಯಾನ್ ಇಂಡಿಯಾ ಚಿತ್ರ. ವಿಚ್ಛೇದನದ ನಂತರ ಕೆಲವು ವರ್ಷಗಳ ಕಾಲ ಕಾಣಸಿಗದ ಸಮಂತಾ ಯಶೋದಾ ಚಿತ್ರ ಬಿಡುಗಡೆಗೂ ಮುನ್ನವೇ ಬಂದು ಆರೋಗ್ಯ ಸರಿಯಿಲ್ಲದಿದ್ದರೂ ಡಬ್ಬಿಂಗ್ ಮಾಡುತ್ತಿದ್ದೇನೆ ಎಂದು ಹೇಳಿ ನಂತರ ಮಯೋಸಿಟಿಸ್ ಸೋಂಕು ತಗುಲಿದೆ ಎಂದು ಭಾವುಕರಾಗಿ ಮಾತನಾಡಿದರು.
ತನ್ನ ವಿಚ್ಛೇದನ ಮತ್ತು ನಂತರದ ಜೀವನದ ಬಗ್ಗೆ ಹಲವು ವರ್ಷಗಳ ಕಾಲ ಮಾತನಾಡದ ಸಮಂತಾ ಶಾಕುಂತಲಂ ಪ್ರಚಾರದಲ್ಲಿ, ವಿಚ್ಛೇದನದ ನಂತರ ನನ್ನ ಜೀವನವು ಬದಲಾಗಿದೆ, ಈ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ಕಷ್ಟ-ಸಂಕಟಗಳನ್ನು ಎದುರಿಸಿದ್ದೇನೆ ಮತ್ತು ನನ್ನ ಆರೋಗ್ಯ ಸಹಕಾರ ನೀಡಿಲ್ಲ ಎಂದಿದ್ದಾರೆ.
ಇತ್ತೀಚೆಗಷ್ಟೇ ಟಾಲಿವುಡ್ ನಿರ್ಮಾಪಕರೊಬ್ಬರು ಸಮಂತಾ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು. ತೆಲುಗಿನ ಮಾಜಿ ನಿರ್ಮಾಪಕ ತ್ರಿಪುರನೇನಿ ಚಿಟ್ಟಿಬಾಬು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದಾರೆ, ಸಮಂತಾ ವೃತ್ತಿಜೀವನ ಮುಗಿದಿದೆ. ವಿಚ್ಛೇದನದ ನಂತರ ಅವರು ಬದುಕಲು ಐಟಂ ಹಾಡುಗಳನ್ನು ಹಾಡಿದರು. ಭಾವನಾತ್ಮಕ ನಾಟಕಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ನೋಡುತ್ತಾರೆ. ಯಶೋದಾ ಚಿತ್ರ ಆ ಸಮಯದಲ್ಲಿ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಡಬ್ಬಿಂಗ್ ಅನ್ನು ಪ್ರಚಾರ ಮಾಡಿದರು. ಈ ಹಿಂದೆ ಅನೇಕ ಸ್ಟಾರ್ ಹೀರೋಗಳು, ಹಿರೋಯಿನ್ ಗಳು ಆರೋಗ್ಯ ಸರಿಯಿಲ್ಲದಿದ್ದರೂ ಬಂದು ಶೂಟಿಂಗ್ ಮಾಡುತ್ತಿದ್ದರು. ಕ್ಯಾನ್ಸರ್ ಬಂದ ಮೇಲೂ ಬಂದು ಸಿನಿಮಾ ಮಾಡಿದ್ದಾರೆ. ಈಗ ಶಾಕುಂತಲಂ ಬಿಡುಗಡೆಗೂ ಮುನ್ನ ಮತ್ತೆ ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.
ಸಾಯುವ ಮುನ್ನ ಈ ಪ್ರಾಜೆಕ್ಟ್ ಮಾಡುತ್ತೇನೆ ಎಂದಿದ್ದಾಳೆ. ಈ ರೀತಿ ಸೆಂಟಿಮೆಂಟ್ ಡ್ರಾಮಾ ಮಾಡಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರೆ ಪ್ರೇಕ್ಷಕರು ಬರುತ್ತಾರೆ. ಈಗ ಸಮಂತಾಗೆ ಸ್ಟಾರ್ ಡಮ್ ಇಲ್ಲ. ಶಾಕುಂತಲಂನಂತಹ ಒಳ್ಳೆಯ ಕಥೆಗೆ ಇಂಥ ನಾಯಕಿಯನ್ನು ಏಕೆ ತೆಗೆದುಕೊಂಡರು ಎಂಬುದು ತಿಳಿಯುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಅವರ ಕಾಮೆಂಟ್ ವೈರಲ್ ಆಗಿದ್ದು, ಸಮಂತಾ ಅಭಿಮಾನಿಗಳು ಟೀಕೆ ಮಾಡುತ್ತಿದ್ದು, ಹಲವರು ಹೌದು ನಿಜ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ವಿಷಯಗಳಿಗೆ ಆಗಾಗ ಸೀರಿಯಸ್ ಆಗಿ ಪ್ರತಿಕ್ರಿಯಿಸುವ ಸಮಂತಾ ಈ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸುತ್ತಾರಾ ನೋಡೋಣ.