ಇಷ್ಟೆಲ್ಲಾ ಆದ್ಮೇಲೆ ಮತ್ತೆ ಬಿಜೆಪಿಗೆ ಬರ್ತಿದ್ದಾರಾ ಶೆಟ್ಟರ್? ಸಿಎಂ ಬೊಮ್ಮಾಯಿ ಹೇಳಿಕೆಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ರವರಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್‌ ಕೂಡ ಪಡೆದುಕೊಂಡರು. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಜಗದೀಶ್​ ಶೆಟ್ಟರ್​ ಮತ್ತೆ ಪಕ್ಷಕ್ಕೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ ಎಂದು ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಕಾಂಗ್ರೆಸ್​ಗೆ ಲಿಂಗಾಯತರ ಬಗ್ಗೆ ಪ್ರೀತಿ ಬಂದಿದೆ. ಬಿಎಸ್ ಯಡಿಯೂರಪ್ಪ ಅವರು ಇರುವವರೆಗೂ ಲಿಂಗಾಯಿತ ಸಮುದಾಯ ನಮನ್ನ ಬಿಟ್ಟು ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಶೆಟ್ಟರ್‌ ಅವರನ್ನು ಗೌರವಯುತವಾಗಿ ಕಂಡಿದೆ. ಅವರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಎಲ್ಲಾ ಬೆಳವಣಿಗೆ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಕಾಂಗ್ರೆಸ್‌ ಸಂಸ್ಕೃತಿ ಯೂಸ್‌ ಅಂಡ್‌ ಥ್ರೋ ಇದ್ದಂತೆ. ಶೆಟ್ಟರ್‌ ಅವರನ್ನು ಯೂಸ್‌ ಅಂಡ್‌ ಥ್ರೋ ಮಾಡುತ್ತೆ. ಇದೆಲ್ಲಾ ಗೊತ್ತಿದ್ದರೂ ಶೆಟ್ಟರ್‌ ಯಾಕೆ ಕಾಂಗ್ರೆಸ್‌ಗೆ ಹೋದ್ರೋ ಗೊತ್ತಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!