ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ನಟ ಕಿಚ್ಚ ಸುದೀಪ ಬಿಜೆಪಿ ಪರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ದಾವಣಗೆರೆ ಉತ್ತರ, ದಕ್ಷಿಣ, ಜಗಳೂರು, ಬಳ್ಳಾರಿಯಲ್ಲಿ ಸುದೀಪ್ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಸಾಗರೋಪಾದಿಯಲ್ಲಿ ಜನ ಸೇರಿದ್ದು, ಸ್ಟಾರ್ ಪ್ರಚಾರಕನ ಹವಾ ಹೆಚ್ಚಾಗಿದೆ.
ಮಾತು ಕೊಟ್ಟಂತೆ ಪ್ರಚಾರ ಮಾಡ್ತೇನೆ, ಕೊನೆಯವರೆಗೂ ಪ್ರಚಾರ ಮಾಡಿಯೇ ಮಾಡ್ತೇನೆ, ನಾನು ಪ್ರಚಾರ ಮಾಡುವ ಅಭ್ಯರ್ಥಿಗಳಿಗೆ ಗೆಲುವು ಸಿಗಲಿ ಎಂದು ಹೇಳಿದ್ದಾರೆ.
ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸುದೀಪ್ ನೋಡಲು ಅಭಿಮಾನಿಗಳು ಸಾಗರವೇ ಹರಿದು ಬಂದಿದ್ದು, ರಸ್ತೆಯುದ್ಧಕ್ಕೂ ಅಭಿಮಾನಿಗಳು ಸುದೀಪ್ ಹೆಸರು, ಅಭ್ಯರ್ಥಿ ಹೆಸರನ್ನು ಕೂಗಿದ್ದಾರೆ.