ಹೊಸದಿಗಂತ ವರದಿ, ಹೊನ್ನಾವರ:
ಆಟೋದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ೯೩.೫ ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ತಾಲೂಕಿನ ಚಂದಾವರ ನಾಕಾ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಗುರುವಾರ ತಡರಾತ್ರಿ ೨.೩೦ ಗಂಟೆ ವೇಳೆ ಶಿವಮೊಗ್ಗದಿಂದ ಕುಮಟಾ ಕಡೆ ತೆರಳುತ್ತಿರುವಾಗ ಚಂದಾವರ ಚೆಕ್ಪೋಸ್ಟ್ ಬಳಿ ಚುನಾವಣಾಕಾರಿಗಳು ತಪಾಸಣೆ ನಡೆಸುವಾಗ ದಾಖಲೆ ಇಲ್ಲದೆ ಹಣ ಸಾಗಾಟ ನಡೆಸುತ್ತಿರುವುದು ತಿಳಿದು ಬಂದಿದೆ.
ಯಾವುದೇ ದಾಖಲೆ ಇಲ್ಲದೆ ೯೩.೫ ಲಕ್ಷ ರೂ. ನಗದು ಹಣವನ್ನು ಆಟೋದಲ್ಲಿ ತುಂಬಿ ಸಾಗಾಟಕ್ಕೆ ಯತ್ನಸಿದ್ದರು. ದಾಳಿಯಲ್ಲಿ ಕಾಗಲ್ ಮೂಲದ ರವಿ ಪಂಡಿತ್, ಆಟೋ ಚಾಲಕ ಶಿವಮೊಗ್ಗದ ಭರತ್ ಹಣ ಸಾಗಾಟದಲ್ಲಿ ತೊಡಗಿದ್ದವರು. ಈ ಕುರಿತು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಇಬ್ಬರು ಆರೋಪಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.