March 5, 2026
Thursday, March 5, 2026
spot_img

‘ಪರಪ್ಪನ ಅಗ್ರಹಾರ’ದಲ್ಲಿ ಭಾವನೆಗಳ ಹಬ್ಬ: ಖಾಕಿ ಸಮವಸ್ತ್ರದ ನಡುವೆ ಕಾಣಿಸಿತು ಮಮತೆಯ ಮಡಿಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಗಂಭೀರ ವಾತಾವರಣದಿಂದ ಕೂಡಿರುವ ಪೊಲೀಸ್ ಠಾಣೆಯೊಂದು ಇಂದು ಅತ್ಯಂತ ಭಾವನಾತ್ಮಕ ಮತ್ತು ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮ ಗರ್ಭಿಣಿ ಸಹೋದ್ಯೋಗಿಯಾದ ಉಮಾ ಅವರಿಗಾಗಿ ಠಾಣೆಯ ಆವರಣದಲ್ಲಿಯೇ ಅದ್ಧೂರಿ ಸೀಮಂತ ಶಾಸ್ತ್ರವನ್ನು ಆಯೋಜಿಸುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದರು.

ಇನ್ಸ್‌ಪೆಕ್ಟರ್ ಸತೀಶ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಠಾಣೆಯ ಎಲ್ಲ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಉಮಾ ಅವರಿಗೆ ಅರಶಿನ, ಕುಂಕುಮ, ಫಲ ತಾಂಬೂಲ ನೀಡಿ, ಹಸಿರು ಬಳೆಗಳನ್ನು ತೊಡಿಸುವ ಮೂಲಕ ಶುಭ ಶಾಸ್ತ್ರೋಕ್ತವಾಗಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಈ ಅನಿರೀಕ್ಷಿತ ಸಂಭ್ರಮವು ಕರ್ತವ್ಯ ನಿರತ ಸಿಬ್ಬಂದಿಯ ನಡುವೆ ಕೌಟುಂಬಿಕ ಬಾಂಧವ್ಯವನ್ನು ಗಟ್ಟಿಗೊಳಿಸಿತು. ಸಹೋದ್ಯೋಗಿ ಉಮಾ ಅವರಿಗೆ ಹೊಸ ಜೀವನದ ಹಾರೈಕೆ ನೀಡಿ, ಠಾಣಾ ಸಿಬ್ಬಂದಿ ತೋರಿದ ಈ ಪ್ರೀತಿ ಮತ್ತು ಸಹಕಾರದ ಮನೋಭಾವವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯಕ್ರಮದಿಂದಾಗಿ ಠಾಣೆಯಲ್ಲಿ ಕ್ಷಣಕಾಲ ಹಬ್ಬದ ವಾತಾವರಣ ಸೃಷ್ಟಿಯಾಗಿ, ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !