ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ, ಕಾಂಗ್ರೆಸ್ ತನ್ನ ಐದು ಗ್ಯಾರೆಂಟಿ ಘೋಷಣೆಗಳನ್ನು ಮಾಡಿದೆ. ಇದೆಲ್ಲವೂ ಜನಸಾಮಾನ್ಯರಿಗೆ ಸಾಕಷ್ಟು ಸಹಾಯ ಆಗುವಂಥದ್ದಾಗಿದೆ.
ಇದರಲ್ಲಿ ಪ್ರಮುಖವಾದ್ದು 200 ಯುನಿಟ್ ವಿದ್ಯುತ್ ಫ್ರೀ ಎನ್ನುವ ಘೋಷಣೆಯಾಗಿದೆ. ಹಳ್ಳಿಗಳಲ್ಲಿ ಜನರು ಕಾಂಗ್ರೆಸ್ ಸರ್ಕಾರ ಬಂದಾಗಿದೆ ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಕೊಪ್ಪಳದಲ್ಲಿ ಈ ವಿದ್ಯಮಾನ ತಾರಕಕ್ಕೇರಿದ್ದು, ಕರೆಂಟ್ ಬಿಲ್ ಕೇಳಲು ಬಂದ ಲೈನ್ಮ್ಯಾನ್ಗೆ ಚಪ್ಪಲಿಯಲ್ಲಿ ಹೊಡೆಯಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಕರೆಂಟ್ ಬಿಲ್ ಕಟ್ಟದೇ ಓಡಿಸಿದ್ದಾರೆ. ಕುಕನಪಲ್ಲಿ ಗ್ರಾಮದಲ್ಲಿ ಮಂಜುನಾಥ್ ಎಂಬ ಲೈನ್ ಮ್ಯಾನ್ ಚಂದ್ರಶೇಖರ್ ಎನ್ನುವವರ ಮನೆಗೆ ಹಳೆಯ ಕರೆಂಟ್ ಬಿಲ್ ಬಾಕಿ ಕೇಳಿದ್ದಾರೆ. ನಾವು ಕಟ್ಟೋದಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ಲೈನ್ಮೆನ್ ಮೇಲೆ ಚಪ್ಪಲಿಯಿಂದ ಹೊಡೆಯಲಾಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.