ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಹೊಟ್ಟೆಯಲ್ಲಿಯೇ ಹುಟ್ಟಿದ ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಜೇತಾರಾಮ್ ಪತ್ನಿ ಊರ್ಮಿಳಾ ನಾಲ್ವರು ಮಕ್ಕಳೊಂದಿಗೆ ಬಾರ್ಮರ್ ಜಿಲ್ಲೆಯ ಮಂಡ್ಲಿ ಸ್ಟೇಷನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಶನಿವಾರ ಜೇತಾರಾಮ್ ಕೆಲಸದ ನಿಮಿತ್ತ ಬಾಲೇಸರ್ ಗೆ ತೆರಳಿದ್ದರು. ಮಧ್ಯಾಹ್ನ ಊರ್ಮಿಳಾ ತನ್ನ ಮಕ್ಕಳಾದ ಭಾವನಾ, ವಿಕ್ರಮ್, ವಿಮಲಾ ಮತ್ತು ಮನಿಷಾರನ್ನು ಭತ್ತ ಸಂಗ್ರಹಿಸುವ ಡಬ್ಬಗಳಲ್ಲಿ ಹಾಕಿ ಮುಚ್ಚಳವನ್ನು ಮುಚ್ಚಿ ಕೊಲೆ ಮಾಡಿದ್ದಾಳೆ.
ಬಳಿಕ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಂಬಂಧಿಕರು ಮನೆಗೆ ಬಂದಾಗಲೇ ಘಟನೆ ಬೆಳಕಿಗೆ ಬಂದದ್ದು. ಗ್ರಾಮಸ್ಥರೊಂದಿಗೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ವಿವರಗಳಿಗೆ ಹೋದರೆ..ಮನೆಯಲ್ಲಿ ಪತಿಯ ಕಿರುಕುಳದಿಂದ ಸಾವನ್ನಪ್ಪಿದ್ದಾಳೆ ಎಂದು ಮೃತಳ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.