ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸೂಪರ್ಸ್ಟಾರ್ ರಜನಿಕಾಂತ್ ಅವರು ಭಾನುವಾರ ತಮ್ಮ ಹಳೆಯ ಸ್ನೇಹಿತ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ನಾನು 9 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದೆ ಮತ್ತು ಅಂದಿನಿಂದ ನಾವು ಸ್ನೇಹಿತರಾಗಿದ್ದೇವೆ ರಂದು ಹೇಳಿದ್ದಾರೆ.
ನಾವು ಫೋನ್ನಲ್ಲಿ ಆಗಾಗ ಮಾತನಾಡುತ್ತೇವೆ. 5 ವರ್ಷಗಳ ಹಿಂದೆ ನಾನು ಚಿತ್ರೀಕರಣಕ್ಕಾಗಿ ಇಲ್ಲಿಗೆ ಬಂದಾಗ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಈಗ ಅವರು ಇಲ್ಲಿದ್ದಾರೆ, ಆದ್ದರಿಂದ ನಾನು ಅವರನ್ನು ಭೇಟಿಯಾದೆ ಎಂದು ರಜನೀಕಾಂತ್ ಹೇಳಿಕೊಂಡಿದ್ದಾರೆ.
ಮುಲಾಯಂ ಸಿಂಗ್ ಗೆ ಗೌರವ ಸಲ್ಲಿಸಿದ ರಜನಿಕಾಂತ್
ಎಎನ್ಐ ಹಂಚಿಕೊಂಡ ಚಿತ್ರಗಳಲ್ಲಿ, ರಜನಿಕಾಂತ್ ಅಖಿಲೇಶ್ ಅವರ ತಂದೆ ಮತ್ತು ಸಮಾಜವಾದಿ ಪಕ್ಷದ ಸಂಸ್ಥಾಪಕ ದಿವಂಗತ ಮುಲಾಯಂ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು.
ರಜನೀಕಾಂತ್ ಜೊತೆಗಿರುವ ಫೋಟೋಗಳನ್ನು ಅಖಿಲೇಶ್ ‘ x ‘ನಲ್ಲಿ ಹಂಚಿಕೊಂಡಿದ್ದಾರೆ.
#WATCH | UP: Actor Rajinikanth meets SP chief Akhilesh Yadav at his residence in Lucknow
(Pics source – SP chief Akhilesh Yadav's twitter handle) pic.twitter.com/ZMN7k2TC1J
— ANI (@ANI) August 20, 2023