ಮದುವೆ ಆಸೆ ಈಡೇರಿಸಿಲ್ಲ! ಸಿಟ್ಟಿಗೆದ್ದ ಯುವಕ ಈಶ್ವರಲಿಂಗವನ್ನೇ ಕದ್ದೊಯ್ದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಫೋನ್ ಕೊಡಿಸೋದ್ರಿಂದ ಹಿಡಿದು ಒಳ್ಳೆ ಜೀವನ ಸಂಗಾತಿ ಬೇಕು ಎನ್ನುವವರೆಗೂ ಎಲ್ಲದಕ್ಕೂ ದೇವರ ಮೊರೆ ಹೋಗೋರುಂಟು. ಅದರಲ್ಲಿಯೂ ಜೀವನ ಸಂಗಾತಿ ಬೇಕು, ಮದುವೆ ಆಗಬೇಕು ಎಂದೆಲ್ಲಾ ಹರಕೆ ಹೊರುವವರೂ ಇದ್ದಾರೆ.

ಆದರೆ ಇಲ್ಲೊಬ್ಬ ಭಕ್ತ ಬೇಡಿಕೆ ಈಡೇರಿಸದ ದೇವರ ಮೂರ್ತಿಯನ್ನೇ ಕದ್ದಿದ್ದಾನೆ. ಮದುವೆಯ ಆಸೆ ಈಡೇರಿಸಿಲ್ಲ ಎಂದು ಸಿಟ್ಟಿಗೆದ್ದ 27 ವರ್ಷದ ಪ್ರಕಾಶ್ ಈಶ್ವರ ಲಿಂಗವನ್ನೇ ಕದ್ದಿದ್ದಾನೆ.

ಉತ್ತರಪ್ರದೇಶದ ಕೌಶಿಂಬಿಯ ಭೈರೋ ಬಾಬಾ ದೇಗುಲದಲ್ಲಿ ಘಟನೆ ನಡೆದಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಪವಾಸ, ವ್ರತ ಎಲ್ಲವನ್ನೂ ಮಾಡಿದ್ದೇನೆ. ಆದರೂ ಮದುವೆಯಾಗಿಲ್ಲ, ಸಿಟ್ಟಿನಿಂದ ಹೀಗೆ ಮಾಡಿದೆ ಎಂದು ಪ್ರಕಾಶ್ ಒಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!