ಹೊಸದಿಗಂತ ವರದಿ, ಅಂಕೋಲಾ:
ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿ ಆಶೀರ್ವಾದ ಮಾಡಿರುವುದು ಜನ ಗಣ ಮನ ಬೆಸೆಯೋಣ ಯಾತ್ರೆಗೆ ಹೊಸ ಪ್ರೇರಣೆ ನೀಡಿದೆ ಎಂದು ನಮೋ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನ ಗಣ ಮನ ಬೆಸೆಯೋಣ ಯಾತ್ರೆಗೆ ಉತ್ತಮ ಜನಸ್ಪಂದನ ದೊರಕಿದ್ದು ಹಲವಾರು ಭಾಗಗಳಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಮೂರನೇ ಬಾರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಆಯ್ಕೆಯಾಗಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗಿದ್ದು ಅಂಕೋಲಾದಲ್ಲಿ ನಡೆದ ಭರ್ಜರಿ ಬೈಕ್ ರ್ಯಾಲಿ ಸ್ಪೂರ್ತಿದಾಯಕ, ಬೆಳಂಬಾರದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿದ ಪಾರಂಪರಿಕ ನಾಟಿ ವೈದ್ಯ ಕುಟುಂಬದ ಹನುಮಂತ ಗೌಡ ಅವರನ್ನು ಭೇಟಿ ಮಾಡಿ ಅವರ ಆಸ್ಪತ್ರೆಯಲ್ಲಿ ಪಾರ್ಶ್ವವಾಯು, ಮೆದುಳು ರಕ್ತಸ್ರಾವ, ಮೂಳೆ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿ ಮಾಡಲು ಅವಕಾಶ ದೊರಕಿರುವುದು ಅಪರೂಪದ ಕ್ಷಣ ಎಂದು ಜನ ಗಣ ಮನ ಬೆಸೆಯೋಣ ಕಾರ್ಯಕ್ರಮದ ಉತ್ತರ ಕನ್ನಡ ಜಿಲ್ಲಾ ಭೇಟಿ ಕುರಿತು ಚಕ್ರವರ್ತಿ ಸೂಲಿಬಲೆಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.