ತಿರುಪತಿ ತಿಮ್ಮಪ್ಪನ ದರುಶನ ಪಡೆದ ರಿಷಬ್ ಪಂತ್, ಅಕ್ಷರ್ ಪಟೇಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಬೆಳಗ್ಗೆ ತಿರುಪತಿಗೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್‌ ಆಟಗಾರರಾದ ರಿಷಬ್ ಪಂತ್ ಹಾಗೂ ಅಕ್ಷರ್ ಪಟೇಲ್ ತಿರುಮಲ ಶ್ರೀವಾರಿ ದರುಶನ ಪಡೆದರು. ವಿಐಪಿ ಬ್ರೇಕ್ ದರ್ಶನದಲ್ಲಿ ಸ್ವಾಮಿಯ ದರ್ಶನ ಪಡೆದ ಆಟಗಾರರು, ಶ್ರದ್ಧಾ ಭಕ್ತಿಯಿಂದ ಶ್ರೀವಾರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು ನಿನ್ನೆ ಒಂದೇ ದಿನ (ಗುರುವಾರ) 59,335 ಭಕ್ತರು ದೇವರ ದರುಶನ ಪಡೆದಿದ್ದಾರೆ. ಶ್ರೀವಾರಿ ಹುಂಡಿಗೆ 3.29 ಕೋಟಿ ರೂ. ಸಂಗ್ರಹವಾಗಿದ್ದು, ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. 23 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಶ್ರೀಗಳ ದರ್ಶನಕ್ಕೆ ಕಾಯುತ್ತಿದ್ದಾರೆ. ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ ತಲುಪಲು 12 ಗಂಟೆ ಸಮಯ ಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!