ಹೊಸದಿಂಗತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನು ಕೊನೇ ಹಂತಕ್ಕೆ ಬಂದಿದೆ ಮತ್ತು ಫಿನಾಲೆ ಇನ್ನೂ ಕೆಲವೇ ದಿನಗಳಲ್ಲಿ ನಡೆಯಲಿದೆ.
ಈ ವಾರ ಇದ್ದ 8 ಸದಸ್ಯರ ಪೈಕಿ ಒಬ್ಬರು ಈ ವಾರ ಎಲಿಮಿನೇಷನ್ ಆಗಿದ್ದಾರೆ. ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಅವರಲ್ಲಿ ಒಬ್ಬರು ಔಟ್ ಆಗುವುದು ಖಚಿತ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಶೋನಲ್ಲಿ ತುಂಬಾ ಆತ್ಮೀಯವಾಗಿದ್ದರು ಮತ್ತು ಕೊನೇ ಹಂತದಲ್ಲಿ ಎಮೋಷನಲ್ ಆಗಿದ್ದಾರೆ.
ತಾವು ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಕಣ್ಣೀರು ಹಾಕಿದ್ದು ನೋಡಿ ಇನ್ನುಳಿದ ಮನೆ ಮಂದಿ ಕೂಡ ಭಾವುಕರಾಗಿದ್ದಾರೆ.