ದಿನಭವಿಷ್ಯ: ಈ ರಾಶಿಯವರಿಗೆ ಗ್ರಹಗತಿ ಪೂರಕವಾಗಿದೆ, ಎಲ್ಲಾ ಕಾರ್ಯವು ಯಶಸ್ಸು

ಮೇಷ
ಅನಿರೀಕ್ಷಿತ ಧನಲಾಭ ಅಥವಾ ಸೊತ್ತು ಲಾಭ. ಉದ್ಯಮದಲ್ಲಿ ಪ್ರಗತಿ. ಕೆಲ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಸಿಗುವುದು. ಆಪ್ತರ ಸಹಕಾರ.

ವೃಷಭ
ವೃತ್ತಿಯ ಒತ್ತಡವು ಇಂದು ಕಡಿಮೆ. ಇದರಿಂದ ಮನಸ್ಸು ನಿರಾಳ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ ಲಭಿಸುವುದು.

ಮಿಥುನ
ನಿಮಗಿಂದು ಗ್ರಹಗತಿ ಪೂರಕವಾಗಿದೆ.
ಹಾಗಾಗಿ ಎಲ್ಲ ಕಾರ್ಯಗಳಲ್ಲೂ  ಯಶಸ್ಸು. ಧನಾಗಮ. ಬಂಧುಗಳಿಂದ ಸೊತ್ತು ಪಡೆಯುವಿರಿ.

ಕಟಕ
ನಿಮಗಿಂದು ಮನೆಯಲ್ಲಿ ಅಧಿಕ ಕಾರ್ಯವಿದೆ.  ಜತೆಗೂಡಿ ಕೆಲಸ ಮಾಡಿದರೆ ಅದು ಸುಲಭವಾದೀತು. ಆರ್ಥಿಕ ಸ್ಥಿತಿ ಸುಧಾರಣೆ. ಧನ ಲಾಭ.

ಸಿಂಹ
ಇಂದು ಅಧಿಕ ಕೆಲಸ. ಒತ್ತಡವೂ ಹೆಚ್ಚು. ಅದರ ಜತೆಗೇ ನಿಮ್ಮ ಕಾರ್ಯಕ್ಕೆ ಕೆಲವರಿಂದ ಅಡ್ಡಿ. ಅಪರಾಹ್ನದ ನಂತರ ಪರಿಸ್ಥಿತಿ ಸುಧಾರಿಸುವುದು.

ಕನ್ಯಾ
ಗೊಂದಲದ ಮನಸ್ಥಿತಿ ಇಂದು ಶಮನ ಗೊಂಡೀತು. ಕಾಡುತ್ತಿದ ಸಮಸ್ಯೆಗೆ ಪರಿಹಾರ ದೊರಕೀತು. ಇಷ್ಟದೇವರ ಪ್ರಾರ್ಥನೆ ಮಾಡಿರಿ.

ತುಲಾ
ಕೆಲವೊಮ್ಮೆ ಅತಿಯಾದ ಒತ್ತಡವು ನಿಮ್ಮಿಂದ ಉತ್ತಮ ಕೆಲಸ ಹೊರತೆಗೆಸುತ್ತದೆ. ಇದು ನಿಮಗೂ ಇಂದು ಅನ್ವಯ. ದಿನದಂತ್ಯಕ್ಕೆ ಎಲ್ಲರಿಂದ ಮೆಚ್ಚುಗೆ.

ವೃಶ್ಚಿಕ
ಇತರರ ಭಾವನೆ ಅರಿತು ವ್ಯವಹರಿಸುವಲ್ಲಿ ನೀವು  ಸಫಲರಾಗುವಿರಿ. ಇದರಿಂದ ಸಂಬಂಧದಲ್ಲಿ ಸುಧಾರಣೆ. ಭಿನ್ನಮತ ನಿವಾರಣೆ. ಆತ್ಮೀಯತೆ ಹೆಚ್ಚುವುದು

ಧನು
ಅನಿರೀಕ್ಷಿತ ಖರ್ಚು. ಅನಿರೀಕ್ಷಿತ ಬೆಳವಣಿಗೆ. ಹೊಟ್ಟೆ ಕೆಡುವಂತಹ ಪ್ರಸಂಗ. ಇಂದಿನ ದಿನ ನಿಮಗೆ ಕಹಿಯಾದರೂ, ಅನುಭವದ ಪಾಠವೂ ನಿಮಗಿದೆ.

ಮಕರ
ಕಣ್ಣು ಕಿವಿ ತೆರೆದಿಡಿ. ಆದರೆ ಬಾಯನ್ನು ಮುಚ್ಚಿಡಿ. ಇದು ನಿಮಗಿಂದು ಸಲಹೆ.  ದುಡುಕಿನ ಮಾತು ಕೆಲಸ ಕೆಡಿಸೀತು. ಎಲ್ಲರ ಜತೆ ಸೌಹಾರ್ದವಿರಲಿ.

ಕುಂಭ
ಆಪ್ತರೊಂದಿಗೆ ಗಂಭೀರ ವಿಷಯದ ಚರ್ಚೆ ನಡೆದೀತು. ಇತರರ ಸಲಹೆ ಪಡೆದೇ ಮುಂದಿನ ಹೆಜ್ಜೆ ಇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಾಣುವುದು.

ಮೀನ
ಕೆಲವರ ಪ್ರತಿರೋಧ ಎದುರಿಸುವಿರಿ. ನಿಮ್ಮ ಕಾರ್ಯ ಟೀಕಿಸುವವರು ಹಲವರಿದ್ದಾರೆ. ಕೆಲವರನ್ನು ಕಡೆಗಣಿಸು ವುದೇ ಒಳಿತು. ಎಲ್ಲರನ್ನು ಮೆಚ್ಚಿಸಲು ಹೋಗದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!