ಡೆಸ್ಟಿನೇಶನ್ ವೆಡ್ಡಿಂಗ್‌ ಗಾಗಿ ಕಾಶ್ಮೀರಕ್ಕೆ ಬನ್ನಿ: ವಿದೇಶದತ್ತ ಹೋಗುವ ಭಾರತೀಯರಿಗೆ ಪ್ರಧಾನಿ ಮೋದಿ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ‘ಚಲೋ ಇಂಡಿಯಾ’ ಉಪಕ್ರಮದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಸರ್ಕಾರ ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಈಗ ನನ್ನ ಮುಂದಿನ ‘ಮಿಷನ್ ವೆಡ್ ಇನ್ ಇಂಡಿಯಾ’ ಜನರು ಜಮ್ಮು ಕಾಶ್ಮೀರಕ್ಕೆ ಬಂದು ತಮ್ಮ ಮದುವೆಗಳನ್ನು ಆಯೋಜಿಸಬೇಕು. ಜೆ&ಕೆನಲ್ಲಿ ಜಿ20 ಅನ್ನು ಹೇಗೆ ಆಯೋಜಿಸಲಾಗಿದೆ ಎಂಬುದನ್ನು ಜಗತ್ತು ನೋಡಿದೆ. ಪ್ರವಾಸಕ್ಕಾಗಿ ಜೆ&ಕೆಗೆ ಯಾರು ಹೋಗುತ್ತಾರೆ ಎಂದು ಜನರು ಕೇಳುತ್ತಿದ್ದ ಕಾಲವೊಂದಿತ್ತು. ಇಂದು, ಜೆ&ಕೆ ಪ್ರವಾಸೋದ್ಯಮ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ ಎಂದರು.

ವಿದೇಶದಲ್ಲಿ ಮದುವೆಯಾಗಲಿರುವ ಭಾರತೀಯರಿಗೆ ಈ ಸಂದೇಶ ನೀಡುತ್ತಿದ್ದೇನೆ. ಅಂತಹವರು ಜಮ್ಮು ಕಾಶ್ಮೀರಕ್ಕೆ ಬಂದು ಇಲ್ಲೇ ಮದುವೆಯಾಗುವಂತೆ ಸಲಹೆ ನೀಡುತ್ತಿದ್ದೇನೆ. ಹಾಗೆ ಮಾಡುವಾಗ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಪ್ರಯಾಣದ ಬಜೆಟ್‌ನ ಕನಿಷ್ಠ 5-10 ಪ್ರತಿಶತವನ್ನು ಸ್ಥಳೀಯ ಸರಕುಗಳನ್ನು ಖರೀದಿಸಲು ಖರ್ಚು ಮಾಡಲು ಒತ್ತಾಯಿಸಲಾಗುತ್ತದೆ. ಹೀಗಾಗಿ ಇಲ್ಲಿನ ಜನರ ಆದಾಯ ಹೆಚ್ಚಲಿದ್ದು, ಜನರಿಗೆ ಉದ್ಯೋಗ ಸಿಗಲಿದೆ ಎಂದರು.

ಈಗ ವೆಡ್ ಇಂಡಿಯಾ ಅಡಿಯಲ್ಲಿ ಜನರು ಮದುವೆಗೆ ಇಲ್ಲಿಗೆ ಬರಬೇಕು. ಪ್ರತಿ ವರ್ಷ 5,000 ಕ್ಕೂ ಹೆಚ್ಚು ಭಾರತೀಯ ಜೋಡಿಗಳು ಮದುವೆಯಾಗಲು ವಿದೇಶಕ್ಕೆ ಹೋಗುತ್ತಾರೆ ಎಂದು ತಿಳಿದು ಬಂದಿದೆ. ಇದರಿಂದ 75,000 ಕೋಟಿಯಿಂದ 1 ಲಕ್ಷ ಕೋಟಿ ರೂ.ಗಳವರೆಗೆ ವೆಚ್ಚವಾಗಲಿದೆ ಎಂಬುದು ಬಹಿರಂಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಈ ಡೆಸ್ಟಿನೇಶನ್ ವೆಡ್ಡಿಂಗ್‌ಗಳು ನಡೆದರೆ, ಹಣವು ದೇಶದಲ್ಲಿ ಉಳಿಯುತ್ತದೆ. ಅಲ್ಲದೆ, ಆ ಪ್ರದೇಶಗಳ ಆರ್ಥಿಕ ವ್ಯವಸ್ಥೆಯೂ ಸುಧಾರಿಸುತ್ತದೆ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ.ಈ ಹಿನ್ನೆಲೆಯಲ್ಲಿ ‘ಕ್ಲೋ ಇಂಡಿಯಾ’ ಕಾರ್ಯಕ್ರಮದಡಿ ಅನಿವಾಸಿ ಭಾರತೀಯರು ಕನಿಷ್ಟ ಐವರು ಕುಟುಂಬ ಸದಸ್ಯರನ್ನಾದರೂ ಭಾರತಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ. 370 ಆರ್ಟಿಕಲ್​ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವು ಅಭಿವೃದ್ಧಿಯಲ್ಲಿ ಹೊಸ ಎತ್ತರವನ್ನು ತಲುಪುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

2023ರಲ್ಲಿ 2 ಕೋಟಿಗೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ. ಪ್ರವಾಸಿಗರಿಗೆ ಭೇಟಿ ನೀಡಲು 40 ತಾಜಾ ತಾಣಗಳನ್ನು ಗುರುತಿಸಲಾಗಿದೆ ಎಂದ ಮೋದಿ, ಜಗತ್ತಿನಾದ್ಯಂತ ಇರುವ ಭಾರತೀಯರು ಇಲ್ಲಿಗೆ ಭೇಟಿ ನೀಡುವಂತೆ ಒತ್ತಾಯಿಸಿದರು.ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ ಅವರು, ವ್ಯಾಪಾರ, ಕೃಷಿ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಭಾಗದ ಯುವಜನರ ಸಾಧನೆಗಳನ್ನು ಎತ್ತಿ ತೋರಿಸಿದರು.`ಮೋದಿಯವರಿಗೆ ಕುಟುಂಬವಿಲ್ಲ’ ಎಂದ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಕುಟುಂಬ ಎಂದು ಹೇಳಿದ ಅವರು, ಇಲ್ಲಿನ ಜನರ ಏಳಿಗೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲವನ್ನೂ ಮಾಡಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!