ಅಜ್ಜಿಯೊಬ್ಬರು ಮನೆಯಲ್ಲಿ ಮೊಮ್ಮಗಳ ಜೊತೆ ವಾಸವಾಗಿದ್ರು. ಇಡೀ ಮನೆಯಲ್ಲಿ ಅಜ್ಜಿ ಹತ್ರ ಇದ್ದಿದ್ದು ಬರೀ ಮಣ್ಣಿನ ಮಡಿಕೆಗಳು ಮಾತ್ರ.
ಒಂದೇ ಒಂದು ತಾಮ್ರದ ಪಾತ್ರೆ ಇತ್ತು, ತನ್ನ ಪೂರ್ವಜರಿಂದ ಪಾತ್ರೆ ಸಿಕ್ಕಿತ್ತು. ಒಮ್ಮೆ ಹೀಗೆ ಅಡುಗೆ ಮಾಡ್ತಾ ಮಡಿಕೆ ಒಡೆದುಹೋಗಿಬಿಡ್ತು. ಅಜ್ಜಿ ಮೊಮ್ಮಗಳಿಗೆ ಮುಂದೇನು ಅನ್ನೋ ಚಿಂತೆ.
ಆಗ ಮೊಮ್ಮಗಳು ಮನೆಲಿರೋ ತಾಮ್ರದ ಪಾತ್ರೆ ಮಾಡಿಬಿಡೋಣ ಅಂತ ಡಿಸೈಡ್ ಮಾಡಿದ್ಲು. ತಾಮ್ರದ ವ್ಯಾಪಾರಿ ಬಂದಾಗ ಪಾತ್ರೆ ಕೊಟ್ಟು ಎಷ್ಟು ಪಾತ್ರೆಗಳನ್ನು ಬದಲಿಗೆ ಕೊಡ್ತೀರಿ ಎಂದು ಕೇಳಿದ್ರು. ಆತ ಪಾತ್ರೆಯನ್ನು ಕೆರೆದು ನೋಡಿದ. ಅದು ತಾಮ್ರ ಅಲ್ಲ, ಬಂಗಾರದ ಪಾತ್ರೆ ಆಗಿತ್ತು.
ಆಸೆಗೆ ಬಿದ್ದ ವ್ಯಾಪಾರಿ ಅಜ್ಜಿ ತಾಮ್ರದ ಪಾತ್ರೆ ಬದಲಾಗಿ ಐದು ಪಾತ್ರೆಗಳನ್ನು ಕೊಡುವುದಾಗಿ ಹೇಳಿದ. ಆದರೆ ಅಷ್ಟು ಸುಲಭವಾಗಿ ತಾಮ್ರದ ವ್ಯಾಪಾರಿ ಒಪ್ಪಿಕೊಂಡಿದ್ದನ್ನು ನೋಡಿ ಇಬ್ಬರಿಗೂ ಆಶ್ಚರ್ಯವಾಗಿತ್ತು.
ಯಾಕೋ ಕಡೆ ಸಮಯದಲ್ಲಿ ಅಜ್ಜಿಗೆ ಪಾತ್ರೆ ಕೊಡಲು ಮನಸ್ಸಾಗಲಿಲ್ಲ. ಸಂಜೆ ಮತ್ತೊಮ್ಮೆ ಬನ್ನಿ ಎಂದು ಹೇಳಿ ಕಳಿಸಿದರು. ಮತ್ತೆ ಅರ್ಧ ಗಂಟೆಗೆ ಇನ್ನೊಬ್ಬಾತ ಬಂದ. ಅವನ ಬಳಿಯೂ ಪಾತ್ರೆಯನ್ನು ಕೊಟ್ಟು ತೋರಿಸಿದರು. ಆತನೂ ಪಾತ್ರೆಯನ್ನು ಕೆರೆದು ನೋಡಿ, ಇದು ಬಂಗಾರ ಎಂದು ಜೋರಾಗಿಯೇ ಹೇಳಿದ.
ಇದನ್ನು ನಾನು ಕೊಳ್ಳಲು ಸಾಧ್ಯ ಇಲ್ಲ, ನನ್ನ ಬಂಡಿಯಲ್ಲಿರುವ ಎಲ್ಲ ಪಾತ್ರೆ ಕೊಟ್ಟರೂ ಇದಕ್ಕೆ ಸರಿಸಾಟಿ ಆಗೋದಿಲ್ಲ. ಎಂದು ಹೇಳಿದ. ಅದಕ್ಕೆ ಅಜ್ಜಿ ಮೊಮ್ಮಗಳಿಗೆ ಆಶ್ಚರ್ಯ ಆಯ್ತು. ಆಗ ತಾಮ್ರದ ಪಾತ್ರೆಯಾತ ತನ್ನ ಬಳಿ ಇದ್ದ ಎಲ್ಲಾ ಪಾತ್ರೆಗಳನ್ನು ನೀಡಿ, ತಾನು ದುಡಿದಿದ್ದ ಎಲ್ಲಾ ಹಣವನ್ನು ನೀಡಿ, ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕೊಟ್ಟು ಪಾತ್ರೆ ಪಡೆದು ಹೋದ.
ಸರಿಯಾದ ವ್ಯಕ್ತಿ ನಿಮ್ಮ ಮೌಲ್ಯವನ್ನು ಅರಿಯುವಲ್ಲಿ ಯಶಸ್ವಿಯಾಗುತ್ತಾನೆ. ಕಾಯುವ ತಾಳ್ಮೆ ನಿಮ್ಮದಾಗಲಿ.