ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಯುವಕನೊಬ್ಬ ಅರೆಬೆತ್ತಲೆಯಾಗಿ ಟವರ್ ಏರಿದ ಘಟನೆ ನಡೆದಿದೆ.
ಯುವಕನೊಬ್ಬ ಟವರ್ ಮೇಲೆ ನಿಂತು ಹುಚ್ಚಾಟ ನಡೆಸುತ್ತಿರುವ ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆದರೆ ಯುವಕ ಯಾರು, ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ಇನ್ನು ತಿಳಿದು ಬಂದಿಲ.
ಕಳೆದ 6 ತಿಂಗಳ ಹಿಂದೆ ಸಿಂದಗಿ ತಾಲೂಕಿನಲ್ಲಿ ಎರಡು ಬಾರಿ ಟವರ್ ಹತ್ತಿ ಹುಚ್ಚಾಟ ಮಾಡಿದ್ದ ಕುಡುಕ. ಮತ್ತೆ ಟವರ್ ಏರಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನು ಕೆಳಗೆ ಇಳಿಸೋಕೆ ಹರಸಾಹಸ ಪಡುತ್ತಿದ್ದಾರೆ.
ವಿಜಯಪುರ: ಯುವಕನೋರ್ವ ಅರೆ ಬೆತ್ತಲಾಗಿ ಟವರ್ ಏರಿ ಹುಚ್ಚಾಟ ಮೆರೆದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಬಸವೇಶ್ವರ ಸರ್ಕಲ್ ನಲ್ಲಿರೋ ಜಿಯೋ ಟವರ್ ಏರಿದ ಆಸಾಮಿ ಹುಚ್ಚಾಟ ಮೆರೆದಿದ್ದಾನೆ.#Vijayapura #Tower #Drunkman #video pic.twitter.com/7zo77QLhJL
— Harshith Achrappady (@HAchrappady) March 19, 2024