ಡಿ.ಕೆ.ಸುರೇಶ್‌ಗೆ ಮತ ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ, ಹಕ್ಕುಪತ್ರ ನೀಡುವುದಿಲ್ಲ: ಇದೆಂತ ಮಾತಾಡಿದ್ರು ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆ ಮತ ಹಾಕದಿದ್ದರೆ ಸಿಎ ನಿವೇಶನ ಮತ್ತು ಕಾವೇರಿ ನೀರು ಕೊಡಿ ಎಂದು ನನ್ನನ್ನು ಕೇಳಬೇಡಿ ಎಂದು ನಗರದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಶಿವಕುಮಾರ್ ಬೆದರಿಕೆ ಹಾಕಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕೊತ್ವಾಲ್ ಬದ್ರರ ಗೂಂಡಾಗಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಇಂದು ಅಪಾರ್ಟ್ ಮೆಂಟ್ ನಿವಾಸಿಗಳ ಸಭೆಯಲ್ಲಿ ಡಿ.ಕೆ. ಸುರೇಶ್‌ಗೆ ಮತ ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ. ಹಕ್ಕುಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿ.ಕೆ. ಶಿವಕುಮಾರ್‌ ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆಗಳಿಗೆ ಜನತೆ ಏ.26ರಂದು ಉತ್ತರ ನೀಡುತ್ತಾರೆ ಇದು ಖಚಿತ-ನಿಶ್ವಿತ-ಖಂಡಿತ ಎಂದು ಪೋಸ್ಟ್‌ನಲ್ಲಿ ಬಿಜೆಪಿ ಕಿಡಿಕಾರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ಡಿಕೆಶಿ, ಗೂಂಡಾಗಿರಿ ಬೇಡ. ಹೀಗೆ ಗೂಂಡಾಗಿರಿ ಮಾಡು ಎಂದು ಕೊರಗಜ್ಜ ಅಥವಾ ಈ ಮುಂಚೆ ನೀನು ನಂಬಿ ಈಗ ಮರೆತಿರುವ ಕಬ್ಬಾಳಮ್ಮ ಹೇಳಿರುವುದೇ. ಹುಷಾರು. ಜುಲೈ, ನೆಲ ನಿನ್ನ ಅಪ್ಪನ ಆಸ್ತಿ ಅಲ್ಲ. ಜಲ ಗಂಗೆಯ ಹಾಗೂ ನೆಲ ಭೂವರಾಹಿಯ ಆಸ್ತಿ. ನಾನು ನೀನು ಎಲ್ಲರೂ ಸ್ವಲ್ಪ ಸಮಯ ಕಳೆಯಲು ಈ ಭೂಮಿಯಲ್ಲಿ ಇದ್ದೇವೆ. ಬಹುಶಃ ನಿನ್ನ ಅಂತ್ಯ ಬಹಳ
    ದಾರುಣವಾಗಿ ಇರುತ್ತದೆ ಅನಿಸಿದೆ

LEAVE A REPLY

Please enter your comment!
Please enter your name here

error: Content is protected !!