ಮಂಡ್ಯದಲ್ಲಿ ಅನುಮಾನಾಸ್ಪದವಾಗಿ ಅವಳಿ ಮಕ್ಕಳ ಸಾವು! ಇದಕ್ಕೆಲ್ಲ ಬೀದಿ ಬದಿ ಐಸ್‌ಕ್ರೀಂ ಕಾರಣ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಂಡ್ಯದಲ್ಲಿ ಒಂದೂವರೆ ವರ್ಷದ ಅವಳಿ ಕಂದಮ್ಮಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮಕ್ಕಳು ಐಸ್‌ಕ್ರೀಂ ತಿಂದ ನಂತರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎಂದು ಅವಳಿ ಮಕ್ಕಳ ತಾಯಿ ಆರೋಪಿಸಿದ್ದಾರೆ.

ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್‌ ಹಾಗೂ ತ್ರಿಶಾ ಮಧ್ಯಾಹ್ನದ ವೇಳೆ ಬೀದಿ ಬದಿಯ ಐಸ್‌ಕ್ರೀಂ ತಿಂದಿದ್ದಾರೆ.

ಮೃತ ಪಟ್ಟ ತ್ರಿಶೂಲ್ ಮತ್ತು ತ್ರಿಶಾಇವರ ಜೊತೆ ಅದೇ ಗ್ರಾಮದ ಉಳಿದ ಮಕ್ಕಳು ಕೂಡ ಐಸ್‌ಕ್ರೀಂ ತಿಂದಿದ್ದಾರೆ. ಆದರೆ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಮಕ್ಕಳು ಚಿಕ್ಕವರಾದ ಕಾರಣ ಐಸ್‌ಕ್ರೀಂ ತಿಂದು ಮೃತಪಟ್ಟಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳ ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!