ದಿಗಂತ ವರದಿ ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಿದ್ದಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
ಈ ಗ್ರಾಮವು ಗಣಿಬಾದಿತ ಪ್ರದೇಶದಲ್ಲಿದ್ದು, ಈ ಗ್ರಾಮವನ್ನು ಗಣಿಬಾದಿತ ಪ್ರದೇಶ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇದರಿಂದ ಗಣಿಬಾದಿತ ಪ್ರದೇಶಗಳಿಗೆ ಸಿಗಬೇಕಾದ ಅನುದಾನ ಹಾಗೂ ಅಗತ್ಯ ಸೌಕರ್ಯಗಳಿಂದ ಗ್ರಾಮವು ವಂಚಿತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.