ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾರೋಗ್ಯದಲ್ಲಿದ್ದ ತಾಯಿಗೆ ಎಳನೀರು ತರಲು ಮರ ಏರಿದ್ದ ಮಗ ಕಾಲುಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.
ಈ ದುರಾದೃಷ್ಟಕರ ಘಟನೆ ಕೆ.ಆರ್ ನಗರದ ಮುಂಜನಹಳ್ಳಿಯಲ್ಲಿ ನಡೆದಿದೆ. ಎಳನೀರು ಕೀಳುವ ವೇಳೆ ಅವಘಡ ಸಂಭವಿಸಿದೆ. ಚೇತನ್ (27) ಮೃತ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ತರಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಎಳನೀರು ಕೀಳುವ ವೇಳೆ ಕಾಲು ಜಾರಿ ಚೇತನ್ ಬಿದ್ದು ಮೃತಪಟ್ಟಿದ್ದಾನೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.