ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಧುವಾಹಿನಿ ನದಿ ಉಕ್ಕೇರಿ ಮಧೂರು ದೇವಸ್ಥಾನ ಪ್ರವೇಶಿಸಿದೆ.
ಈ ಪುಣ್ಯ ಕ್ಷಣಗಳನ್ನು ಕಂಡು ಭಕ್ತಾದಿಗಳು ಪುಳಕಿತಗೊಂಡರು. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ಅಲ್ಲಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ಕೆಲವೆಡೆ ಕೃಷಿಗೂ ಹಾನಿ ಉಂಟಾಗಿದೆ.