ಮಳೆಯನ್ನು ತಡೆಯೋಕಾಗಲ್ಲ, ಬಟ್‌ ಸಿಟಿನ ಅದಕ್ಕೆ ತಕ್ಕ ಹಾಗೆ ಕಾಂಗ್ರೆಸ್‌ ರೆಡಿ ಮಾಡಿಲ್ಲ: ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮೇಘಸ್ಫೋಟ ಮಳೆಯಿಂದ ಐಟಿ ನಗರ ಬೆಂಗಳೂರು ಪ್ರವಾಹ ಪರಿಸ್ಥಿತಿ ನಡುವೆ ಹೋರಾಡುತ್ತಿದ್ದರೆ, ಸರ್ಕಾರ ಮಳೆಯಿಂದ ಉಂಟಾಗಬಹುದಾದ ಅನಾಹುತ ಪರಿಸ್ಥಿತಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.

ಮಾಜಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕ ಡಾ ಸಿಎನ್ ಅಶ್ವತ್ ನಾರಾಯಣ್, ರಾಜ್ಯ ಸರ್ಕಾರ ಮಳೆಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ಸರಿಯಾಗಿ ಸನ್ನದ್ಧವಾಗಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಬಿಕ್ಕಟ್ಟಿನ ಮಧ್ಯೆ ಕಾಂಗ್ರೆಸ್ ಸರ್ಕಾರ ಕಿವುಡ ರೀತಿಯಲ್ಲಿ ವರ್ತಿಸುತ್ತಿದೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಬೇಜವಾಬ್ದಾರಿತನವು ನಗರವನ್ನು ದುರ್ಬಲಗೊಳಿಸಿದೆ. ಸ್ಲೈಸ್ ಗೇಟ್ ಯೋಜನೆ ಸೇರಿದಂತೆ ಅನೇಕ ಎಚ್ಚರಿಕೆಗಳು ಮತ್ತು ಪರಿಣಾಮಕಾರಿ ನೀರು ನಿರ್ವಹಣೆ ಬಗ್ಗೆ ನಮ್ಮ ಪ್ರಸ್ತಾಪಗಳ ಹೊರತಾಗಿಯೂ, ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಬೆಂಗಳೂರಿನ ನಿವಾಸಿಗಳನ್ನು ಪ್ರವಾಹದಿಂದ ತಪ್ಪಿಸಬಹುದಾಗಿತ್ತು. ಆದರೆ ಯಾವುದೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಲಘು ಮಳೆಯ ನಂತರ ನೆರೆಹೊರೆ ಪ್ರದೇಶಗಳಲ್ಲಿ ವಾಟರ್ ಲಾಗಿಂಗ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಬೆಂಗಳೂರು ಕಂಡಿದೆ, ತಜ್ಞರು ಹೇಳುವ ಪರಿಸ್ಥಿತಿಯು ಯೋಜಿತವಲ್ಲದ ನಗರ ಬೆಳವಣಿಗೆ ಮತ್ತು ನಿಷ್ಪರಿಣಾಮಕಾರಿ ಒಳಚರಂಡಿ ವ್ಯವಸ್ಥೆಗಳಿಂದ ಉಲ್ಬಣಗೊಂಡಿದೆ. ಈ ದೀರ್ಘಕಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!