ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಅನೌನ್ಸ್ ಮಾಡಿದ ಬಳಿಕ ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ಡಾಲಿ ಧನಂಜಯ್, ರಾಯರ ದರ್ಶನ ಪಡೆದಿದ್ದಾರೆ.
ಬಳಿಕ ನಗರದ ಸ್ಟೇಷನ್ ರಸ್ತೆ ಬಳಿ ಖಾಸಗಿ ಮಾಲ್ ಉದ್ಘಾಟನೆಗೆ ಬಂದಿದ್ದ ಡಾಲಿ ಧನಂಜಯ್ ನೋಡಲು ಅಭಿಮಾನಿಗಳು ನೂಕುನುಗ್ಗಲು ಮಾಡಿದರು. ಕಾಲ್ತುಳಿತವಾಗಿದ್ದರಿಂದ ಪೊಲೀಸರು ಲಾಠಿ ಪ್ರಹಾರ ಮಾಡಿ ಜನರನ್ನ ಚದುರಿಸಿದ್ದಾರೆ.
ಇನ್ನು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು ಸಮಸ್ಯೆ ತಂದೊಡ್ಡಿದ್ದಾರೆ, ಇದರಲ್ಲಿ ಅಭಿಮಾನಿಯೊಬ್ಬ ಡಾಲಿ ಕನ್ನಡಕ ಕದಿಯೋದಕ್ಕೆ ಟ್ರೈ ಮಾಡಿದ್ದಾನೆ.
ರಾಯಚೂರಿನಲ್ಲಿ ಮಾತನಾಡಿದ ನಟ, ಉತ್ತರ ಕರ್ನಾಟಕ ಜನ ತೋರಿಸುವ ಪ್ರೀತಿ ರಫ್ ಆ್ಯಂಡ್ ಟಫ್ ಆದ್ರೂ ಅಗಾಧವಾದದ್ದು. ಖುಷಿಯಾಗುತ್ತೆ ರಾಯಚೂರಿಗೆ ಮತ್ತೆ ಮತ್ತೆ ಬರುತ್ತೇನೆ ಎಂದರು. ಝಿಬ್ರಾ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ ಎಲ್ಲರೂ ನೋಡಿ ಎಂದು ತಿಳಿಸಿದರು.