ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಪವಿತ್ರಾ ಗೌಡ ಇಂದು ರಿಲೀಸ್ ಆಗೋದಿಲ್ಲ. ಸೋಮವಾರ ನಮಗೆ ಆರ್ಡರ್ ಶೀಟ್ ಸಿಗುತ್ತದೆ. ಅದಾದ ಬಳಿಕ ರೀಲಿಸ್ ಆಗ್ತಾರೆ. ಆರ್ಡರ್ ಶೀಟ್ನಲ್ಲೇ ಷರತ್ತುಬದ್ಧ ಇರುತ್ತವೆ. ಈ ಕೇಸ್ನಲ್ಲೇ ಮೂಲ ದಾಖಲಾತಿಗಳು ಇನ್ನಿತರ ಅಂಶಗಳನ್ನು ನೋಡಿ ಕೋರ್ಟ್ ತೀರ್ಮಾನ ಮಾಡುತ್ತೆ. ಹೆಣ್ಣು ಮಕ್ಕಳು ಅಂತ ಬೇಲ್ ಕೊಡೋದಕ್ಕೆ ಆಗೋದಿಲ್ಲ. ನಾಯ್ಯಾಲಯಕ್ಕೆ ಕೆಲವೊಂದು ನಿರ್ಬಂಧ ಇರುತ್ತದೆ. ಆ ಕೇಸ್ನಲ್ಲಿ ಆರೋಪಿಗಳ ಪಾತ್ರ ಏನಿದೆ ಅಂತ ವಿಚಾರಣೆ ಮಾಡ್ತಾರೆ ಎಂದರು.