6 ತಿಂಗಳ ಬಳಿಕ ಜಾಮೀನು: ಪವಿತ್ರ ಗೌಡ ವಕೀಲರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್​ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ ಸುದ್ದಿಗಾರರೊಂದಿಗೆ ಮಾತಾಡಿದ್ದಾರೆ. ಪವಿತ್ರಾ ಗೌಡ ಇಂದು ರಿಲೀಸ್​ ಆಗೋದಿಲ್ಲ. ಸೋಮವಾರ ನಮಗೆ ಆರ್ಡರ್​ ಶೀಟ್​ ಸಿಗುತ್ತದೆ. ಅದಾದ ಬಳಿಕ ರೀಲಿಸ್ ಆಗ್ತಾರೆ. ಆರ್ಡರ್​ ಶೀಟ್​​ನಲ್ಲೇ ಷರತ್ತುಬದ್ಧ ಇರುತ್ತವೆ. ಈ ಕೇಸ್​ನಲ್ಲೇ ಮೂಲ ದಾಖಲಾತಿಗಳು ಇನ್ನಿತರ ಅಂಶಗಳನ್ನು ನೋಡಿ ಕೋರ್ಟ್​ ತೀರ್ಮಾನ ಮಾಡುತ್ತೆ. ಹೆಣ್ಣು ಮಕ್ಕಳು ಅಂತ ಬೇಲ್​ ಕೊಡೋದಕ್ಕೆ ಆಗೋದಿಲ್ಲ. ನಾಯ್ಯಾಲಯಕ್ಕೆ ಕೆಲವೊಂದು ನಿರ್ಬಂಧ ಇರುತ್ತದೆ. ಆ ಕೇಸ್​ನಲ್ಲಿ ಆರೋಪಿಗಳ ಪಾತ್ರ ಏನಿದೆ ಅಂತ ವಿಚಾರಣೆ ಮಾಡ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!