ದಿನಭವಿಷ್ಯ: ಸಂತೋಷ ಸಿಕ್ಕಾಗ ಬೇಡ ಎನ್ನಬೇಡಿ, ಇಂದು ಅನಿರೀಕ್ಷಿತ ಧನಲಾಭ

ಮೇಷ
ಹತಾಶೆ ನಿಮ್ಮನ್ನು ಕಾಡುತ್ತಿದೆ. ಶಾಂತ ಮನಸ್ಥಿತಿ ಮುಖ್ಯ.   ನೆಗೆಟಿವ್ ಚಿಂತನೆ ಬಾಽಸದಂತೆ ನಿರಂತರ ಕಾರ್ಯದಲ್ಲಿ ತೊಡಗಿಕೊಳ್ಳಿ.

ವೃಷಭ
ನಿಮ್ಮ ಪ್ರಗತಿಗೆ ಅಡ್ಡಿ. ದೃಢ ಮನದಿಂದ ಅದನ್ನು ನಿವಾರಿಸಲು ಸಾಧ್ಯ. ಸಂಗಾತಿ ಜತೆ ಭಿನ್ನಮತ.    ಭವಿಷ್ಯದ ಕುರಿತು ಚಿಂತೆ ಕಾಡಬಹುದು.

ಮಿಥುನ
ಯಶಸ್ವಿ ದಿನ. ಗುರಿ ಸಾಧನೆ. ಧನಪ್ರಾಪ್ತಿ. ಹೊಸ ಯೋಜನೆಗೆ ಕೈ ಹಾಕಲು ಕಾಲ ಪ್ರಶಸ್ತ. ವ್ಯಕ್ತಿಯೊಬ್ಬರ ಜತೆ ಸ್ನೇಹ ವೃದ್ಧಿ. ಕೌಟುಂಬಿಕ ಸಮಾಧಾನ.

ಕಟಕ
ಆರಂಭದಲ್ಲಿ ಅಡ್ಡಿ ಎದುರಿಸುವಿರಿ. ಆದರೆ ಅದನ್ನು ನಿವಾರಿಸಲು ಶಕ್ತರಾಗುವಿರಿ.  ಆರೋಗ್ಯದ ಕುರಿತು ಕಾಳಜಿ ವಹಿಸಿರಿ.

ಸಿಂಹ
ಆತ್ಮೀಯರ ಕುರಿತು ಮಮತೆ ಹೆಚ್ಚಲಿದೆ. ಅವರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ. ಹಣದ ಹೂಡಿಕೆ ಲಾಭ ತರುವುದು. ಧನಪ್ರಾಪ್ತಿ.

ಕನ್ಯಾ
ನಿಮಗಿಂದು ಪೂರಕ ದಿನ. ಆತ್ಮವಿಶ್ವಾಸ ಹೆಚ್ಚು. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಸಹಕಾರ, ಸಮಾಧಾನ.

ತುಲಾ
ಇಂದು ಮಿಶ್ರಫಲ. ಪ್ರತಿಕೂಲ ಸನ್ನಿವೇಶ ಎದುರಾದರೂ ತಾಳ್ಮೆ ಕಳಕೊಳ್ಳದಿರಿ. ಆಪ್ತರ ಜತೆ ವಾಗ್ವಾದ. ಹಣದ ವ್ಯವಹಾರ ಸುಲಲಿತ.

ವೃಶ್ಚಿಕ
ಕೆಲ ವಿಷಯದಲ್ಲಿ ರಾಜಿ ಮಾಡಿಬೇಕಾದಿತು.  ನಿಮ್ಮದೇ ಧೋರಣೆಗೆ ಅಂಟಿಕೊಳ್ಳದಿರಿ. ಹಣದ ವಿಚಾರದಲ್ಲಿ ನಿಮ್ಮ ಯೋಜನೆ ಫಲಿಸಲಿದೆ.

ಧನು
ಸಂತೋಷ ಸಿಕ್ಕುವ ಅವಕಾಶ ಕಳಕೊಳ್ಳದಿರಿ. ಆಗಿಹೋದುದಕ್ಕೆ ಕೊರಗುತ್ತಾ ಕೂರಬೇಡಿ. ಕಷ್ಟ ನಿವಾರಣೆಯ ಕಾಲ ಸಮೀಪ ಬಂದಿದೆ.

ಮಕರ
ನಿಮ್ಮ ಹಾದಿಯಲ್ಲಿ ಅಡ್ಡಿ ತೋರಿಬಂದೀತು. ಕಠಿಣ ಪರಿಶ್ರಮದಿಂದ ಅದಕ್ಕೆ ಪರಿಹಾರ ಸಿಕ್ಕೀತು. ನಿರೀಕ್ಷಿಸಿದಷ್ಟು ಹಣಪ್ರಾಪ್ತಿ ಆಗಲಾರದು.

ಕುಂಭ
ಹೆಚ್ಚು ಕೆಲಸ. ವಿರಾಮಕ್ಕೆ ಅವಕಾಶ ಸಿಗದು. ಶಾಂತತೆ ಕಾಯ್ದುಕೊಳ್ಳುವ ಕಲೆ ಅರಿಯಿರಿ. ಇಲ್ಲವಾದರೆ ಉದ್ವಿಗ್ನ ಸ್ಥಿತಿ ಸಂಭವ.

ಮೀನ
ಸವಾಲಿನ ದಿನ. ಪ್ರತಿಕೂಲ -ಲಿತಾಂಶ, ನೆಗೆಟಿವ್ ಚಿಂತನೆ ನಿಮ್ಮ ಕಾರ್ಯದ ಮೇಲೂ ಪರಿಣಾಮ ಬೀರಲಿದೆ. ಧ್ಯಾನ ಸಹಕಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!