ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜಿತ್ ಪವಾರ್ ಒಳ್ಳೆಯ ಪ್ರೋಗ್ರೆಸಿವ್ ಲೀಡರ್, ಇಂದು ನಮ್ಮಿಂದ ದೂರ ಆಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಬೆಳ್ಳಂಬೆಳ್ಳಗ್ಗೆ ಈ ವಿಚಾರ ಕೇಳಿ ನನಗೂ ಶಾಕ್ ಆಯ್ತು. ಹಿರಿಯ ನಾಯಕರು ಯಾವಾಗಲೂ ಪಾಸಿಟಿವ್ ಆಗಿ ಆಲೋಚನೆ ಮಾಡ್ತಾ ಇದ್ರು. ಪಾರ್ಟಿ ಬಿಟ್ಟು ಹೋದಾಗ ನಮಗೆ ಬೇಜಾರು ಆಗಿತ್ತು, ಆದರೆ ಅದು ಅವರ ತೀರ್ಮಾನ. ಒಳ್ಳೆ ಪ್ರೋಗ್ರೆಸಿವ್ ಲೀಡರ್ ಆಗಿದ್ರು. ಇವತ್ತು ಅವರು ನಮ್ಮಿಂದ ದೂರ ಆಗಿದ್ದಾರೆ ಅವರ ಅತ್ಮಕ್ಕೆ ಶಾಂತಿ ಸಿಗಲಿ. ದೇವರು ಕುಟುಂಬದ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.



