July 16, 2026
Thursday, July 16, 2026
spot_img

ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಹೆಚ್ಚುವರಿ ಬಸ್‌ + ಡಿಸ್ಕೌಂಟ್‌ ಘೋಷಿಸಿದ ಕೆಎಸ್‌ಆರ್‌ಟಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ನೇನು ಯುಗಾದಿ ಹಾಗೂ ರಂಜಾನ್‌ ಬಂದೇ ಬಿಡುತ್ತದೆ, ಹಬ್ಬದ ದಿನ ಊರಿಗೆ ಹೋಗುವವರು ಟಿಕೆಟ್‌ ಸಿಗದೇ ಸಮಸ್ಯೆ ಅನುಭವಿಸುತ್ತಾರೆ. ಆದರೆ ಈ ಸಮಸ್ಯೆಗೆ ಕೆಎಸ್‌ಆರ್‌ಟಿಸಿ ಪರಿಹಾರ ನೀಡಿದೆ.

ರೈಲು ಟಿಕೆಟ್‌ ಸಿಕ್ಕಿಲ್ಲ ಎಂದರೂ ಪರವಾಗಿಲ್ಲ, ಹೆಚ್ಚುವರಿ ಬಸ್‌ಗಳ ಮೂಲಕ ನೀವು ನಿಮ್ಮ ಊರನ್ನು ತಲುಪಬಹುದಾಗಿದೆ. ಯಗಾದಿ ಹಾಗೂ ರಂಜಾನ್ ಹಬ್ಬ ಒಟ್ಟಿಗೆ ಬಂದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.

ಮಾ.18, 19 ಹಾಗೂ 20ರಂದು ಬೆಂಗಳೂರಿನಿಂದ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ಒಟ್ಟು 2,000 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಜೊತೆಗೆ ಹಬ್ಬದ ಹಿನ್ನೆಲೆ ವಿಶೇಷ ರಿಯಾಯಿತಿಯನ್ನು ನೀಡಿದೆ.

ನಾಲ್ಕು ಅಥವಾ ಹೆಚ್ಚಿನ ಟಿಕೆಟ್‌ ಬುಕ್‌ ಮಾಡಿದರೆ ಐದು ಪರ್ಸೆಂಟ್‌. ಎರಡು ವೇ ಟಿಕೆಟ್‌ ಬುಕ್‌ ಮಾಡಿದರೆ ಹತ್ತು ಪರ್ಸೆಂಟ್‌ ಡಿಸ್ಕೌಂಟ್‌ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !