February 5, 2026
Thursday, February 5, 2026
spot_img

ಭಾರತ ವಿರುದ್ಧ ಪಾಕ್ ಮ್ಯಾಚ್ ಬಹಿಷ್ಕಾರ: ಈ ಕುರಿತು ಸೂರ್ಯಕುಮಾರ್ ಯಾದವ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ತಾನು ಭಾರತದ ವಿರುದ್ಧ ಆಡಲ್ಲ ಎಂದು ಹೇಳಿದೆ . ಇದರಿಂದ ಐಸಿಸಿ ಜೊತೆಗೆ ಬಿಸಿಸಿಐ ಹಾಗೂ ಪಿಸಿಬಿಗೂ ನಷ್ಟವುಂಟಾಗಲಿದೆ.

ಇನ್ನು ಪಾಕಿಸ್ತಾನದ ಪ್ರಧಾನಿ ನಾವು ನಿಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ , ಪಾಕಿಸ್ತಾನ ನಮ್ಮ ವಿರುದ್ಧ ಆಡಲು ನಾವು ರೆಡಿ ಎಂದು ಹೇಳಿದ್ದಾರೆ.

ಪಾಕಿಸ್ತಾನದ ನಿರ್ಧಾರಗಳು ನಮ್ಮ ನಿಯಂತ್ರಣದಲ್ಲಿಲ್ಲ. ಆದರೆ ನಾವು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿಲ್ಲ, ಅವರು ಆಡಲು ನಿರಾಕರಿಸಿದ್ದಾರೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ನಾವು ಆಡಲು ಸಿದ್ಧರಿದ್ದೇವೆ. ನಮ್ಮ ಟಿಕೆಟ್‌ಗಳು ಸಹ ಬುಕ್ ಆಗಿವೆ. ನಾವು ಮುಂಬೈನಲ್ಲಿ ಅಮೆರಿಕ ವಿರುದ್ಧ ಮತ್ತು ನಂತರ ದೆಹಲಿಯಲ್ಲಿ ಕೆನಡಾ ವಿರುದ್ಧ ಆಡುತ್ತೇವೆ. ಈ ಎರಡು ಪಂದ್ಯಗಳ ನಂತರ, ನಾವು ದೆಹಲಿಯಿಂದ ಕೊಲಂಬೊಗೆ ಹೊರಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ನಾವು ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಬಾರಿ ಆಡಿದ್ದೇವೆ ಮತ್ತು ನಾವು ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಮಗೆ ಮತ್ತೆ ಆಡಲು ಅವಕಾಶ ಸಿಕ್ಕರೆ, ನಾವು ಆಡುತ್ತೇವೆ ಮತ್ತು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !